ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಕ್ರಿಕೆಟ್‌ ಸರಣಿಗೆ ತೆಂಡೂಲ್ಕರ್‌, ಮೊಂಗಿಯಾ

By Staff
|
Google Oneindia Kannada News

ಶ್ರೀಲಂಕಾ ಕ್ರಿಕೆಟ್‌ ಸರಣಿಗೆ ತೆಂಡೂಲ್ಕರ್‌, ಮೊಂಗಿಯಾ
ಭಾರತ ಕ್ರಿಕೆಟ್‌ ತಂಡ ಪ್ರಕಟ. ಉತ್ತಪ್ಪ, ವೇಣುಗೋಪಾಲ್‌ಗೆ ಅರ್ಧಚಂದ್ರ.

ಮುಂಬಯಿ : ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋಣ ಏಕದಿನ ಪಂದ್ಯಗಳ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ಗುರುವಾರ(ಜು.20) ಪ್ರಕಟಿಸಲಾಗಿದ್ದು, ಸಚಿನ್‌ ತೆಂಡೂಲ್ಕರ್‌ ಹಾಗೂ ದಿನೇಶ್‌ ಮೊಂಗಿಯಾ ಮರಳಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ವೇಣುಗೋಪಾಲರಾವ್‌ ಹಾಗೂ ರಾಬಿನ್‌ ಉತ್ತಪ್ಪ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಸಚಿನ್‌ ಮತ್ತು ಮೊಂಗಿಯಾ ಪ್ರವೇಶಿಸಿದ್ದಾರೆ.

ಸಚಿನ್‌ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣವಾದ್ದರಿಂದ ಸೇರ್ಪಡೆ ನಿರ್ವಿಘ್ನವಾಗಿ ನಡೆಯಿತು. ಕೌಂಟಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ದಿನೇಶ್‌ ಮೊಂಗಿಯಾ ತಂಡಕ್ಕೆ ಮರಳಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟೆಸ್ಟ್‌ ಸರಣಿ ಗೆಲ್ಲಲು ಪ್ರಮುಖ ಕಾರಣವಾದ ಅನಿಲ್‌ ಕುಂಬ್ಳೆ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯೂ ಸುಳ್ಳಾಯಿತು. ಆಗಸ್ಟ್‌ 14ರಿಂದ 29ರವರೆಗೆ ನಡೆಯಲಿರುವ ಈ ಸರಣಿಯಲ್ಲಿ ಆತಿಥೇಯ ಶ್ರೀಲಂಕಾ, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸಲಿವೆ.

ತಂಡದ ವಿವರ ಕೆಳಗಿನಂತಿದೆ :

  • ರಾಹುಲ್‌ ದ್ರಾವಿಡ್‌
  • ಸಚಿನ್‌ ತೆಂಡೂಲ್ಕರ್‌
  • ವೀರೇಂದ್ರ ಸೆಹ್ವಾಗ್‌
  • ಮಹೇಂದ್ರ ಸಿಂಗ್‌ ದೋನಿ,
  • ಯುವರಾಜ್‌ ಸಿಂಗ್‌
  • ಮಹಮದ್‌ ಕೈಫ್‌
  • ಎಸ್‌.ಶ್ರೀನಾಥ್‌
  • ಇರ್ಫಾನ್‌ ಪಠಾಣ್‌
  • ಸುರೇಶ್‌ ರೈನ
  • ದಿನೇಶ್‌ ಮೊಂಗಿಯಾ
  • ರುದ್ರ ಪ್ರತಾಪ್‌ ಸಿಂಗ್‌
  • ಮುನಾಫ್‌ ಪಟೇಲ್‌
  • ಅಜಿತ್‌ ಅಗರ್‌ಕರ್‌
  • ಹರ್ಭಜನ್‌ ಸಿಂಗ್‌
  • ರಮೇಶ್‌ ಪೋವಾರ್‌
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X