ನಾಗಲೀಲೆ : ಹೊಟ್ಟೆ ಸೇರೋ ಮೊಟ್ಟೆಗೆ ಪೂಜೆ-ಪುನಸ್ಕಾರ
ನಾಗಲೀಲೆ
:
ಹೊಟ್ಟೆ
ಸೇರೋ
ಮೊಟ್ಟೆಗೆ
ಪೂಜೆ-ಪುನಸ್ಕಾರ
ನಾಗರಾಜ
ಮೊಟ್ಟೆ
ಮೇಲೆ
ಯಾಕೆ
ಕೂತ?
ಕೆ.ಎಸ್.ಗಾರ್ಡನ್ನಲ್ಲಿ
ಭಕ್ತರ
ಸಡಗರ!
ನಗರದ ಕೆ.ಎಸ್.ಗಾರ್ಡನ್ ಬಡಾವಣೆಯ ಮಂಜುಳಾ ಎಂಬ ಮಹಿಳೆಯಾಬ್ಬರಿಗೆ, ಅಂಗಡಿಯಲ್ಲಿ ದೊರೆತ ಮೊಟ್ಟೆಗೆ ಈ ಭಾಗ್ಯ ಸಿಕ್ಕಿದೆ. ಆ ಮೊಟ್ಟೆ ಮೇಲೆ ಹಾವಿನ ರೂಪ ಮೂಡಿರುವುದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿಯೇ ಪೂಜೆಪುನಸ್ಕಾರಗಳು ಸಾಂಗವಾಗಿ ನಡೆದಿವೆ.
ಕರುಮಾರಮ್ಮನ ಪಾದದಡಿ ಮೊಟ್ಟೆಯಿಟ್ಟು, ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ, ಭಕ್ತಿ ಶ್ರದ್ಧೆಗಳಿಂದ ಭಕ್ತಸಮುದಾಯ ಪೂಜೆ ಸಲ್ಲಿಸುತ್ತಿದೆ. ಕುತೂಹಲದಿಂದ ಮತ್ತು ಭಕ್ತಿಯಿಂದ ವಿವಿಧ ಬಡಾವಣೆಗಳಿಂದ ಜನರು ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಹರಕೆ ಮಾಡಿಕೊಳ್ಳುತ್ತಿದ್ದಾರೆ.
ಮೊಟ್ಟೆ ಮೇಲೆ ಹಾವಿನ ರೂಪ ಮೂಡಿದ್ದು, ದೇವರ ಲೀಲೆ ಎಂಬ ಭಾವನೆ ಜನರಲ್ಲಿದೆ. ಈ ಮೊಟ್ಟೆಯನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳು ನಡೆದಿವೆ. ಜನ ಮರುಳೋ ಜಾತ್ರೆ ಮರುಳೋ ಅಂತಿರಾ? ಅಥವಾ ನೀವೂ ಕೆನ್ನೆ ಬಡಿದುಕೊಂಡು, ಕೈ ಜೋಡಿಸುತ್ತಿರೋ?
(ದಟ್ಸ್ ಕನ್ನಡ ವಾರ್ತೆ)