ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ದೇಶಕ ಸುಖಧರೆ ಪ್ರಾಣಾಪಾಯದಿಂದ ಪಾರು

By Staff
|
Google Oneindia Kannada News

ನಿರ್ದೇಶಕ ಸುಖಧರೆ ಪ್ರಾಣಾಪಾಯದಿಂದ ಪಾರು
‘ಸೈನಿಕ’ ನಿರ್ದೇಶಕರಿಗೆ ಅಪಘಾತ : ಕಾಲಿಗೆ ಶಸ್ತ್ರ ಚಿಕಿತ್ಸೆ, ರಾಡು ಜೋಡಣೆ

ಬೆಂಗಳೂರು : ರಸ್ತೆ ಅಪಘಾತಕ್ಕೊಳಗಾಗಿದ್ದ ಚಿತ್ರ ನಿರ್ದೇಶಕ ಮಹೇಶ್‌ ಸುಖಧರೆ, ನಗರದ ಹಾಸ್‌ಮಟ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ನಗರದ ಹಾಸ್‌ಮಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಖಧರೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಕಬ್ಬಿಣದ ರಾಡುಗಳನ್ನು ಅಳವಡಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಶುಕ್ರವಾರ(ಜು.14) ತಿಳಿಸಿವೆ.

ಕಳೆದ ಎರಡು ದಿನಗಳ ಹಿಂದೆ, ಸುಖಧರೆ ತಮ್ಮ ಪತ್ನಿ, ಮಗಳು ಹಾಗೂ ಚಿಕ್ಕಪ್ಪ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರು ಚಾಲನೆ ಮಾಡುತ್ತಿದ್ದ ಅವರ ಚಿಕ್ಕಪ್ಪ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆಸಿದ್ದರು. ಅಪಘಾತ ನೆಲಮಂಗಲದ ಸಮೀಪ ನಡೆದಿತ್ತು.

ಮಹೇಶ್‌ ಸುಖಧರೆ, ಸಂಭ್ರಮ, ಸೈನಿಕ, ಸಾರ್ವಭೌಮ ಹಾಗೂ ಸಿದ್ದು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X