ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆನೋವಿನಿಂದ ಕುಸಿದ ಶಂಕರಮೂರ್ತಿ, ಜಯದೇವದಲ್ಲಿ ಚಿಕಿತ್ಸೆ

By Staff
|
Google Oneindia Kannada News

ಎದೆನೋವಿನಿಂದ ಕುಸಿದ ಶಂಕರಮೂರ್ತಿ, ಜಯದೇವದಲ್ಲಿ ಚಿಕಿತ್ಸೆ
ಆರೋಗ್ಯದ ಬಗ್ಗೆ ಭಯಪಡುವ ಆತಂಕವಿಲ್ಲ -ವೈದ್ಯರ ಸ್ಪಷ್ಟನೆ

ಬೆಂಗಳೂರು : ಉನ್ನತ ಶಿಕ್ಷಣ ಸಚಿವ ಹಾಗೂ ಮೇಲ್ಮನೆ ನಾಯಕ ಡಿ.ಎಚ್‌.ಶಂಕರಮೂರ್ತಿ ಆಯಾಸದಿಂದ ಬಳಲಿದ ಕಾರಣ, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಗುರುವಾರ(ಜುಲೈ 13)ವಿಧಾನಪರಿಷತ್‌ ಕಲಾಪದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ವಿಧಾನಸೌಧಕ್ಕೆ ಆಗಮಿಸಿದ್ದರು. ಆ ಸಮಯದಲ್ಲಿ ತೀವ್ರ ಸುಸ್ತು ಹಾಗೂ ಬಳಲಿಕೆಯಾದ ಕಂಡುಬಂದಿತು. ತಕ್ಷಣವೇ ಅವರನ್ನು ಜಯದೇವ ಹೃದ್ರೋಗ ಚಿಕಿತ್ಸಾಲಯಕ್ಕೆ ಕರೆದೊಯ್ಯಲಾಯಿತು.

ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿ, ರಕ್ತ ತಪಾಸಣೆ, ಇಸಿಜಿ ಹಾಗೂ ವಿವಿಧ ತಪಾಸಣೆಗಳನ್ನು ಮಾಡಲಾಗಿದೆ. ಒತ್ತಡದಿಂದ ಸುಸ್ತಾಗಿದೆಯಷ್ಟೆ. ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ತಪಾಸಣೆ ನಂತರ ಶಂಕರಮೂರ್ತಿ ಮನೆಗೆ ತೆರಳಿದರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X