ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಎರಡು ತಿಂಗಳಲ್ಲಿ ಬಡವರೆಲ್ಲರಿಗೂ ಬೆಚ್ಚನೆಯ ಮನೆ’

By Staff
|
Google Oneindia Kannada News

‘ಎರಡು ತಿಂಗಳಲ್ಲಿ ಬಡವರೆಲ್ಲರಿಗೂ ಬೆಚ್ಚನೆಯ ಮನೆ’
ಮುಖ್ಯಮಂತ್ರಿಗಳ ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿದೆಯೇ?

ಬೆಂಗಳೂರು : ಬಡತನದಿಂದ ಬಳಲುತ್ತಿರುವ ಮಂದಿಗೆ ಸೂರಿನ ಆಸೆ ಗಗನ ಕುಸುಮವೇ ಸರಿ. ಆದರೆ ಈ ಎಲ್ಲರಿಗೂ ಸೂರು ಕಲ್ಪಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಹೊಸ ಯೋಜನೆ ಮುಂದಿನ ಒಂದೆರಡು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದೂ ಸಹಾ ಅವರು ಭರವಸೆ ನೀಡಿದ್ದಾರೆ. ಪಕ್ಷದ ಶಾಸಕರು ಮತ್ತು ಕಾರ್ಯಕರ್ತರ ಮೊದಲ ಜಿಲ್ಲಾ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಹೊಸ ಯೋಜನೆಯನ್ವಯ ಎಲ್ಲ ಬಡ ಕುಟುಂಬಗಳಿಗೂ ಒಂದು ಮಲಗುವ ಕೋಣೆಯುಳ್ಳ ಮನೆ ಲಭ್ಯವಾಗಲಿದೆ. ಈ ಯೋಜನೆಯಿಂದ ಆಟೋ ಚಾಲಕರು, ಗಾರ್ಮೆಂಟ್ಸ್‌ ನೌಕರರು ಸೇರಿದಂತೆ ಇನ್ನಿತರ ಬಡವರು ಬೆಚ್ಚನೆಯ ಮನೆ ಹೊಂದಲಿದ್ದಾರೆ. ಸ್ಥಳೀಯ ಚುನಾವಣೆಗೂ ಮುನ್ನವೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕೊಸರು : ಮುಖ್ಯಮಂತ್ರಿಗಳ ಹೊಸಯೋಜನೆ ಸ್ವಾಗತಾರ್ಹ. ಆದರೆ ಕುಮಾರಸ್ವಾಮಿ ಮಾತು(ಭರವಸೆ), ಅವರ ಮನೆ ತಲುಪುವ ತನಕವಾದರೂ ನೆನಪಿನಲ್ಲಿರಲಿ ಎಂಬುದು ಪ್ರತಿಪಕ್ಷಗಳ ಕುಹಕ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X