ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಹಲ್ಲುಕಿತ್ತ ಹಾವಿನಂತಿರಲಿ : ಸಿಎಂ ಇಂಗಿತ

By Staff
|
Google Oneindia Kannada News

ಲೋಕಾಯುಕ್ತ ಹಲ್ಲುಕಿತ್ತ ಹಾವಿನಂತಿರಲಿ : ಸಿಎಂ ಇಂಗಿತ
ವೆಂಕಟಾಚಲ ಮರುನೇಮಕದ ಬಗ್ಗೆ ಬಿಜೆಪಿ-ಜೆಡಿಎಸ್‌ ನಡುವೆ ಭಿನ್ನಧ್ವನಿ

ಬೆಂಗಳೂರು : ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಪ್ರಶ್ನೆಯೇ ಇಲ್ಲ. ಯಾವುದೋ ಒಂದು ಇಲಾಖೆಗೆ ಪರಮಾಧಿಕಾರ ನೀಡಿದರೆ, ಸರ್ಕಾರಕ್ಕೇನು ಕೆಲಸವಿರುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಪತ್ರಕರ್ತರ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಪ್ರಶ್ನೆಯಾಂದಕ್ಕೆ ಉತ್ತರಿಸುತ್ತ, ಈ ಅಭಿಪ್ರಾಯ ವ್ಯಕ್ತಪಡಿಸಿದರು.

ವ್ಯವಸ್ಥೆಯಲ್ಲಿನ ಪ್ರತಿಯಾಬ್ಬರೂ ಸ್ವಯಂಪ್ರೇರಿತರಾಗಿ, ಸಮಾಜದ ಹಿತಕ್ಕೆ ಶ್ರಮಿಸಬೇಕು. ಕೇವಲ ಒಬ್ಬ ವ್ಯಕ್ತಿಯಿಂದ ಸಮಾಜ ಸುಧಾರಣೆ ಅಸಾಧ್ಯ. ಹೀಗಾಗಿ ಪರಮಾಧಿಕಾರದ ಪ್ರಶ್ನೆ ಅಪ್ರಸ್ತುತ ಎಂದ ಕುಮಾರಸ್ವಾಮಿ, ವೆಂಕಟಾಚಲ ಅವರನ್ನು ಎರಡನೇ ಸಲ ನೇಮಕ ಮಾಡದಿರುವ ಇಂಗಿತವನ್ನು ವ್ಯಕ್ತಪಡಿಸಿದರು.

ಮೈತ್ರಿ ಪಕ್ಷವಾದ ಬಿಜೆಪಿಯಾಂದಿಗೆ ಚರ್ಚಿಸಿ, ಸದ್ಯದಲ್ಲಿಯೇ ಲೋಕಾಯುಕ್ತ ಸ್ಥಾನವನ್ನು ಭರ್ತಿ ಮಾಡುತ್ತೇವೆ. ಅಧಿವೇಶನ ಮುಗಿದ ನಂತರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾರದ ಮೂರು ದಿನ ವಾಸ್ತವ್ಯಹೂಡಿ, ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X