ಸಾಹಿತ್ಯ ಸಮ್ಮೇಳನ : ಮೂರು ದಿನಗಳ ಬದಲಿಗೆ ನಾಲ್ಕು ದಿನ
ಸಾಹಿತ್ಯ
ಸಮ್ಮೇಳನ
:
ಮೂರು
ದಿನಗಳ
ಬದಲಿಗೆ
ನಾಲ್ಕು
ದಿನ
ನೆಹರೂ
ಕ್ರೀಡಾಂಗಣದಲ್ಲಿ
ವೇದಿಕೆ,
ಸರ್ಕಾರದಿಂದ
1
ಕೋಟಿ
ರೂಪಾಯಿ
ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ, ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ಮೊದಲು ಡಿಸೆಂಬರ್ 20ರಿಂದ 22ರವರೆಗೆ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಅದರ ಬದಲಿಗೆ ಡಿಸೆಂಬರ್ 20ರಿಂದ 23ರವರೆಗೆ ನಡೆಸಲು ಸಭೆ ಅನುಮೋದನೆ ನೀಡಿತು. ನೆಹರೂ ಕ್ರೀಡಾಂಗಣದಲ್ಲಿ ಸಮ್ಮೇಳನ ನಡೆಸಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.
ಸಮ್ಮೇಳನಕ್ಕೆಂದು ಈ ಮೊದಲು ಸರ್ಕಾರ 15 ಲಕ್ಷ ರೂಪಾಯಿ ಬಿಡುಗಡೆ ಮಾಡುವುದು ರೂಢಿಯಾಗಿತ್ತು. ಆದರೆ ಕಳೆದ ಬಾರಿ ಬೀದರ್ನಲ್ಲಿ ನಡೆದ ಸಮ್ಮೇಳನಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡುವ ಮೂಲಕ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ಹೊಸ ಪದ್ಧತಿಗೆ ಚಾಲನೆ ನೀಡಿದ್ದರು.
ಸರ್ಕಾರ ಮುಂಬರುವ ಸಮ್ಮೇಳನಕ್ಕೆ ಒಂದು ಕೋಟಿ ರೂಪಾಯಿ ನೀಡಲಿದೆ ಎಂದು ಹಣಕಾಸು ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಆ ಮೂಲಕ ಅವರು ಧರ್ಮಸಿಂಗ್ ದಾಖಲೆ ಮುರಿದಂತಾಗಿದೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು