ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಲಕ್ಷ್ಮಿಚಂದ್ರಶೇಖರ್‌ರ ಏಕವ್ಯಕ್ತಿ ನಾಟಕಗಳು

By Staff
|
Google Oneindia Kannada News

ಇಂದಿನಿಂದ ಲಕ್ಷ್ಮಿಚಂದ್ರಶೇಖರ್‌ರ ಏಕವ್ಯಕ್ತಿ ನಾಟಕಗಳು
ರಂಗಶಂಕರದಲ್ಲಿ ‘ಸಿಂಗಾರವ್ವ ಮತ್ತು ಅರಮನೆ’ ಹಾಗೂ ಇನ್ನಿತರ ನಾಟಕಗಳು

ಬೆಂಗಳೂರು : ಖ್ಯಾತ ರಂಗನಟಿ ಲಕ್ಷ್ಮಿಚಂದ್ರಶೇಖರ್‌ ಅವರ ಏಕಪಾತ್ರ ಅಭಿನಯದ ನಾಟಕಗಳನ್ನು, ರಂಗಾಸಕ್ತರು ಬುಧವಾರ ಮತ್ತು ಗುರುವಾರ ಸವಿಯಬಹುದು.

ಕ್ರಿಯೇಟಿವ್‌ ಥಿಯೇಟರ್‌ ತಂಡ ಮೂರು ಏಕಪಾತ್ರಗಳ ನಾಟಕಗಳನ್ನು ಜೆ.ಪಿ.ನಗರದಲ್ಲಿರುವ ರಂಗಶಂಕರದಲ್ಲಿ ಪ್ರಸ್ತುತಪಡಿಸುತ್ತಿದೆ. ಬುಧವಾರ ಸಂಜೆ 7.20ಕ್ಕೆ ಚಂದ್ರಶೇಖರ ಕಂಬಾರ ಅವರ ‘ಸಿಂಗಾರವ್ವ ಮತ್ತು ಅರಮನೆ’ ನಾಟಕದ ರೂಪಾಂತರ ಪ್ರಯೋಗವನ್ನು ನೋಡಬಹುದು. ಸೌಮ್ಯ ವರ್ಮ ನಾಟಕವನ್ನು ನಿರ್ದೇಶಿಸುವರು.

ಗುರುವಾರ ಸಂಜೆ 7.20ಕ್ಕೆ ‘ಎದ್ದೇಳು’ ಮತ್ತು ಇನ್ನೊಂದು ನಾಟಕವನ್ನು ಲಕ್ಷ್ಮಿ ಚಂದ್ರಶೇಖರ್‌ ಪ್ರದರ್ಶಿಸುವರು. ಟಿಕೆಟ್‌ ದರ ರೂ.49. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 26719911/ 26718483/ 94490 40160 ಸಂಪರ್ಕಿಸಿ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X