ಸರ್ಕಾರ ಉಳಿಸಲು ಉಭಯ ಪಕ್ಷಗಳಲ್ಲಿ ಭಾರೀ ಕಸರತ್ತು
ಸರ್ಕಾರ
ಉಳಿಸಲು
ಉಭಯ
ಪಕ್ಷಗಳಲ್ಲಿ
ಭಾರೀ
ಕಸರತ್ತು
ಭಾನುವಾರ
ಬಿಜೆಪಿ
ಶಾಸಕಾಂಗ
ಪಕ್ಷದ
ಸಭೆ,
ಎ.ಕೆ.ಆ್ಯಂಟನಿ
ನಗರಕ್ಕೆ
ಈ ಸಂಬಂಧದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಲುವಾಗಿ, ಭಾರತೀಯ ಜನತಾ ಪಕ್ಷ ಭಾನುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ರಾಜ್ಯ ಬಜೆಟ್ ಕುರಿತು ಚರ್ಚಿಸಲು ಸೋಮವಾರ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಬಿಎಂಐಸಿ ಯೋಜನೆ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉಳಿಸುವುದರ ಜೊತೆಗೆ, ನೈಸ್ ಕಂಪನಿ ಮೇಲೆ ಹಿಡಿತ ಸಾಧಿಸಲು ವ್ಯಾಪಕ ಕಸರತ್ತು ಆರಂಭವಾಗಿದೆ.
ಜಾತ್ಯತೀತ ಜನತಾದಳದಲ್ಲಿ ಎಲ್ಲವೂ ಸರಿ ಇಲ್ಲ. ಬಿಎಂಐಸಿ ಯೋಜನೆ ವಿಚಾರದಲ್ಲಿ ಗೌಡರು ನೀಡಿದ ಹೇಳಿಕೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ಇದಲ್ಲದೆ ತಂದೆಯ ನಿಲುವಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಹೆಸರು ಹೇಳಲಿಚ್ಛಿಸದ ಕೆಲವು ಜೆಡಿಎಸ್ ನಾಯಕರು ದೇವೇಗೌಡರ ನಿಲುವು ವಿರೋಧಿಸಿದ್ದು, ಪಕ್ಷ ಈ ನಿಟ್ಟಿನಲ್ಲಿ ತಾಳ್ಮೆ ಪ್ರದರ್ಶಿಸಬೇಕು. ಬಿಎಂಐಸಿ ಯೋಜನೆಗೆ ನೀಡಿದ ಭೂಮಿಯ ಸಲುವಾಗಿ ಸರ್ಕಾರ ಪತನಗೊಳಿಸಲು ಮುಂದಾಗಬಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಉಸ್ತುವಾರಿ ಹೊತ್ತ್ತಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ.ಕೆ.ಆ್ಯಂಟನಿ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
(ಏಜೆನ್ಸೀಸ್)
ಮುಖಪುಟ / ಕುಮಾರ-ಪರ್ವ