ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರವು ಕೇಂದ್ರ : ತೆರಿಗೆದಾರರ ಗೊಂದಲಗಳಿಗೆ ತೆರೆ

By Staff
|
Google Oneindia Kannada News

ನೆರವು ಕೇಂದ್ರ : ತೆರಿಗೆದಾರರ ಗೊಂದಲಗಳಿಗೆ ತೆರೆ
ಆದಾಯ ತೆರಿಗೆ ಪಾವತಿ ಈಗ ಸರಳ, ಇನ್ನಷ್ಟು ಸುಲಭ!

ಬೆಂಗಳೂರು : ಆದಾಯ ತೆರಿಗೆ ಪಾವತಿದಾರರಿಗೆ ಪೂರಕವಾಗುವಂತೆ, ನಗರದಲ್ಲಿ ಸಹಾಯ ಕೇಂದ್ರ ಆರಂಭಗೊಂಡಿದೆ. ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಕೇಂದ್ರವನ್ನು ಉದ್ಘಾಟಿಸಿದರು.

ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ ಕಚೇರಿಯಲ್ಲಿ ಸಹಾಯ ಕೇಂದ್ರವನ್ನು ಆದಾಯ ತೆರಿಗೆ ಇಲಾಖೆ ಮತ್ತು ಎಫ್‌ಕೆಸಿಸಿಐ ಆರಂಭಿಸಿವೆ. ಈ ಕೇಂದ್ರದಲ್ಲಿ ತೆರಿಗೆದಾರರ ಸಂದೇಹ ಮತ್ತು ಗೊಂದಲಗಳಿಗೆ ಪರಿಹಾರ ನೀಡಲಾಗುತ್ತದೆ.

ಅರ್ಜಿ ಭರ್ತಿ, ತೆರಿಗೆ ಮೊತ್ತ ಲೆಕ್ಕಹಾಕುವುದು, ಚಲನ್‌ ತುಂಬುವುದು ಮತ್ತಿತರ ಸೌಲಭ್ಯ ಈ ಕೇಂದ್ರಗಳಲ್ಲಿ ಲಭ್ಯ. ರಾಜಧಾನಿಯಲ್ಲಿ ಮಾತ್ರವಲ್ಲದೇ ರಾಜ್ಯದ 15ಕಡೆ ಸಹಾಯ ಕೇಂದ್ರಗಳು ಕಾರ್ಯಾರಂಭಿಸಿವೆ. ಪ್ರತಿದಿನ ಮಧ್ಯಾಹ್ನ 2ರಿಂದ 6ಗಂಟೆಯ ತನಕ ಸೇವೆ ಲಭ್ಯ. ಈ ಕೇಂದ್ರಗಳು ಜೂನ್‌.15ರಿಂದ ಆಗಸ್ಟ್‌ 14ರವರೆಗೆ ಮತ್ತು ಮಾರ್ಚ್‌ 1ರಿಂದ 31ರವರೆಗೆ ಕಾರ್ಯ ನಿರ್ವಹಿಸಲಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X