ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಗೋದಾಮಾಗಿದ್ದ ಅನಕೃ ಮನೆ ಇನ್ಮುಂದೆ ಸ್ಮಾರಕ

By Staff
|
Google Oneindia Kannada News

ಚಪ್ಪಲಿ ಗೋದಾಮಾಗಿದ್ದ ಅನಕೃ ಮನೆ ಇನ್ಮುಂದೆ ಸ್ಮಾರಕ
ಅನಕೃ ನಿವಾಸ ನೆಲಸಮವಾಗುವ ಮುನ್ನ, ಕುಮಾರಸ್ವಾಮಿ ಭರವಸೆ ಕಾರ್ಯರೂಪಕ್ಕೆ ಬರಲಿ.

ಬೆಂಗಳೂರು : ಕಾದಂಬರಿ ಲೋಕದ ಧ್ರುವತಾರೆ ಅ.ನ. ಕೃಷ್ಣರಾವ್‌(ಅನಕೃ) ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡ ಭವನದಲ್ಲಿ ಸುವರ್ಣ ಕರ್ನಾಟಕ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಅವರು ಮಾತನಾಡುತ್ತಿದ್ದರು.

ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿರುವ ಅನಕೃ ನಿವಾಸ ‘ಅನ್ನಪೂರ್ಣ’, ಪ್ರಸ್ತುತ ಚಪ್ಪಲಿ ಗೋದಾಮು ಆಗಿ ಪರಿವರ್ತನೆಯಾಗಿದೆ. ಖಾಸಗಿಯವರು ಈ ಮನೆಯನ್ನು ಸದ್ಯದಲ್ಲಿಯೇ ನೆಲಸಮ ಮಾಡಿ, ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಅಂಶಗಳು ನನ್ನ ಗಮನಕ್ಕೆ ಬಂದಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಅನಕೃ ನಿವಾಸವನ್ನು ಮತ್ತೆ ಅದರ ಮಾಲೀಕರಿಂದ ಸರ್ಕಾರ ಖರೀದಿಸಿ, ಸ್ಮಾರಕವಾಗಿ ಪರಿವರ್ತಿಸಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X