ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಜಿಲ್ಲೆ : ಕೋಮುಗಲಭೆ, 12 ಮಂದಿಗೆ ಗಾಯ

By Staff
|
Google Oneindia Kannada News

ಉಡುಪಿ ಜಿಲ್ಲೆ : ಕೋಮುಗಲಭೆ, 12 ಮಂದಿಗೆ ಗಾಯ
ವಾಹನಗಳಿಗೆ ಬೆಂಕಿ... 8 ಮಂದಿ ಬಂಧನ... ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ

ಉಡುಪಿ : ಜಿಲ್ಲೆಯ ಕೋಟ ಪಡುಕರೆ ಸಮೀಪದ ಕೋಟ್ತಟ್ಟು ಗ್ರಾಮದಲ್ಲಿನ ಕೋಮುಗಲಭೆಯಲ್ಲಿ , ಪೊಲೀಸರು ಸೇರಿದಂತೆ 12ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ನಿರತರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ. ಪೊಲೀಸರು ಬಿಗಿಬಂದೋಬಸ್ತು ಮಾಡಿದ್ದಾರೆ.

ದೇವಸ್ಥಾನವೊಂದರ ಮುಂಭಾಗದಲ್ಲಿದ್ದ ಅನ್ಯಕೋಮಿನ ಬಾವುಟ ತೆಗೆದದ್ದು, ವಿವಾದಕ್ಕೆ ಕಾರಣ. ಈ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ. ಪರಿಸ್ಥಿತಿ ಹತೋಟಿಗೆ ಪೊಲೀಸರು ಮುಂದಾಗಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X