ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ಸರ್ಕಾರಿ ನೌಕರರಿಂದ ರಾಜ್ಯವ್ಯಾಪಿ ಮುಷ್ಕರ

By Staff
|
Google Oneindia Kannada News

ಬುಧವಾರ ಸರ್ಕಾರಿ ನೌಕರರಿಂದ ರಾಜ್ಯವ್ಯಾಪಿ ಮುಷ್ಕರ
ಸರ್ಕಾರದ ನೌಕರ ವಿರೋಧಿ ನೀತಿಗಳು ಕೊನೆಯಾಗಲಿ -ಯು.ಡಿ.ನರಸಿಂಹಯ್ಯ

ಬೆಂಗಳೂರು : ಸರ್ಕಾರದ ನಿರ್ಲಕ್ಷ್ಯ ಪ್ರತಿಭಟಿಸಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಬುಧವಾರ(ಜೂ. 14)ರಾಜ್ಯವ್ಯಾಪಿ ಧರಣಿ ನಡೆಸಲು ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರ ವಿರೋಧಿ ನೀತಿ ವಿರೋಧಿಸಿ, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಧರಣಿ ನಡೆಯಲಿದೆ. ಬೆಂಗಳೂರಿನ ಕೆ.ಆರ್‌.ವೃತ್ತದ ಲೋಕೋಪಯೋಗಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಯು.ಡಿ.ನರಸಿಂಹಯ್ಯ ತಿಳಿಸಿದ್ದಾರೆ.

ಶೇ. 50ರ ತುಟ್ಟಿಭತ್ಯೆ ವಿಲೀನ, ವೇತನ ತಾರತಮ್ಯ ನಿವಾರಣೆ, ಸೂಕ್ತ ನಿವೃತ್ತಿ ವೇತನ , ಖಾಸಗೀಕರಣ ಕೈಬಿಡುವುದು ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸಲಾಗುತ್ತಿದೆ ಎಂದು ನರಸಿಂಹಯ್ಯ ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X