ನೈಸ್ ನನ್ನನ್ನು ಖರೀದಿಸಲು ಯತ್ನಿಸಿತ್ತು - ಕುಮಾರಸ್ವಾಮಿ
ನೈಸ್
ನನ್ನನ್ನು
ಖರೀದಿಸಲು
ಯತ್ನಿಸಿತ್ತು
-
ಕುಮಾರಸ್ವಾಮಿ
ಮುಕ್ತ
ಚರ್ಚೆಗೆ
‘ನೈಸ್’ಗೆ
ಮುಖ್ಯಮಂತ್ರಿಗಳಿಂದ
ಆಹ್ವಾನ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪತ್ರಕರ್ತರೊಬ್ಬರ ಮೂಲಕ ಈ ಖರೀದಿ ಪ್ರಕ್ರಿಯೆಗೆ ನೈಸ್ ಚಾಲನೆ ನೀಡಿತ್ತು. ಆದರೆ ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಯೋಜನೆಯಲ್ಲಿ ನನ್ನ ಜಮೀನಿದೆ ಎಂಬ ಪುಕಾರುಗಳಿವೆ. ನಾನು ಈ ಭಾಗದಲ್ಲಿ ಜಮೀನು ಖರೀದಿಸಿದ್ದು 1983-84ರಲ್ಲಿ. ಆಗ ಈ ಯೋಜನೆ ಬಂದೇ ಇರಲಿಲ್ಲ. ಭೂಮಾಫಿಯಾಕ್ಕೆ ನಾನು ಅವಕಾಶ ನೀಡುವುದಿಲ್ಲ. ಅಭಿವೃದ್ಧಿ ಹೆಸರಲ್ಲಿ ನೈಸ್ ಬಡವರ ಜಮೀನನ್ನು ಗುಳುಂ ಮಾಡುತ್ತಿದೆ. ಮುಕ್ತ ಚರ್ಚೆಗೆ ನೈಸ್ ಬಂದರೆ, ಸ್ವಾಗತ ಎಂದು ಕುಮಾರಸ್ವಾಮಿ ಹೇಳಿದರು.
ಎಚ್ಚರಿಕೆ... ಎಚ್ಚರಿಕೆ : ಈ ಮಧ್ಯೆ ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅವಶ್ಯಕ ಜಮೀನನ್ನು ಬಿಟ್ಟು ಕೊಡಿ. ವಿಳಂಬ ಮಾಡಿದರೆ ಮತ್ತೆ ಸುಪ್ರೀಂ ಕೋರ್ಟ್ಗೆ ಹೋಗ ಬೇಕಾಗುತ್ತದೆ ಎಂದು ಬೆದರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ