ತ್ವರಿತ ಅಲರ್ಟ್ ಗಳಿಗಾಗಿ
For Daily Alerts
82 ರೈತರಿಗೆ ಜೂನ್ 22ರಂದು ಕೃಷಿ ಪ್ರಶಸ್ತಿ -ಕಾಶಂಪುರ
82
ರೈತರಿಗೆ
ಜೂನ್
22ರಂದು
ಕೃಷಿ
ಪ್ರಶಸ್ತಿ
-ಕಾಶಂಪುರ
ಬಹುಪಯೋಗಿ
ಕೃಷಿ
ಸಮಿತಿಯ
ಲವಲವಿಕೆಗೆ
ಸಚಿವರ
ಪ್ರಯತ್ನ
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ವಿಜೇತ ರೈತರನ್ನು ಸಮಾರಂಭದಲ್ಲಿ ಸನ್ಮಾನಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಸಮಿತಿ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕಳೆದ ಮೂರು ವರ್ಷಗಳ ಹಿಂದೆ ಕೃಷಿಗರ ಸಮಸ್ಯೆಗಳಿಗೆ ಸ್ಪಂದಿಸಲು ಕೃಷಿ ಸಮಿತಿ ಅಸ್ತಿತ್ವಕ್ಕೆ ಬಂತು. ಆದರೆ ಸಮಿತಿಯ ಕಾರ್ಯಕಲಾಪಗಳು ನೆನೆಗುದಿಗೆ ಬಿದ್ದಿವೆ. ಸಮಿತಿ ಈವರೆಗೆ ಕೇವಲ ಎರಡು ಸಭೆಗಳನ್ನು ಮಾತ್ರ ನಡೆಸಿದೆ ಎಂದು ವಿಷಾದಿಸಿದರು.
ಮುಂದಿನ ದಿನಗಳಲ್ಲಿ ಸಮಿತಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಲಿದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಗೊತ್ತುವಳಿ ಮಂಡಿಸಲಾಗಿದೆ ಎಂದು ಕಾಶಂಪುರ ಹೇಳಿದರು.
(ಯುಎನ್ಐ)
ಮುಖಪುಟ / ವಾರ್ತೆಗಳು
Comments
Story first published: Tuesday, June 13, 2006, 23:53 [IST]