ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸಲಾತಿ ಚಳವಳಿ : ಇನ್ಫೋಸಿಸ್‌ ಎದಿರು ಪ್ರತಿಭಟನೆ

By Staff
|
Google Oneindia Kannada News

ಮೀಸಲಾತಿ ಚಳವಳಿ : ಇನ್ಫೋಸಿಸ್‌ ಎದಿರು ಪ್ರತಿಭಟನೆ
ಇನ್ಫೋಸಿಸ್‌ಗೆ ಸರ್ಕಾರ ಜಮೀನು ನೀಡಬಾರದು : ಪ್ರಜಾವಿಮೋಚನಾ ಚಳವಳಿ ಒತ್ತಾಯ

ಬೆಂಗಳೂರು : ಉನ್ನತ ಶಿಕ್ಷಣ ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ವಿರೋಧಿಸುತ್ತಿರುವ ಇನ್ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ವಿರುದ್ಧ, ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹೊಸೂರು ರಸ್ತೆಯಲ್ಲಿರುವ ಇನ್ಫೋಸಿಸ್‌ ಸಂಸ್ಥೆ ಎದಿರು ಪ್ರತಿಭಟನೆ ನಡೆಯಿತು. ಚಳವಳಿಯ ನೇತೃತ್ವವಹಿಸಿದ್ದ ಪಟಾಪಟ್‌ ನಾಗರಾಜ್‌ ಮಾತನಾಡುತ್ತ, ನಾರಾಯಣಮೂರ್ತಿ ತಮ್ಮ ಧೋರಣೆಗಳನ್ನು ಬದಲಿಸಿಕೊಳ್ಳಬೇಕು. ಅಲ್ಲದೇ ಸ್ಥಳೀಯರಿಗೆ ಇನ್ಫೋಸಿಸ್‌ನಲ್ಲಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ನಾಡು-ನುಡಿ ಮತ್ತು ದಲಿತರ ಬಗ್ಗೆ ನಿರ್ಲಕ್ಷ್ಯ ಪ್ರದರ್ಶಿಸುವ ನಾರಾಯಣಮೂರ್ತಿ ಅವರಿಗೆ, ಸರ್ಕಾರ ಜಮೀನು ನೀಡಬಾರದು ಎಂದು ನಾಗರಾಜ್‌ ಹೇಳಿದರು. ಪ್ರತಿಭಟನೆಯಲ್ಲಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

(ದಟ್ಸ್‌ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X