ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರಿಡಾರ್ ಯೋಜನೆ : ಸರ್ಕಾರದ ನಿರ್ಧಾರವೇ ಅಂತಿಮ
ಕಾರಿಡಾರ್
ಯೋಜನೆ
:
ಸರ್ಕಾರದ
ನಿರ್ಧಾರವೇ
ಅಂತಿಮ
ಯೋಜನೆ
ವಿರೋಧಿಯಲ್ಲ,
ಹೆಚ್ಚುವರಿ
ಭೂಮಿಯೇಕೆ
ಎಂಬುದಷ್ಟೇ
ಪ್ರಶ್ನೆ--ದೇವೇಗೌಡ
ಭಾನುವಾರ ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಾರಿಡಾರ್ ಯೋಜನೆ ಕುರಿತು ಸಮ್ಮಿಶ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಸುಪ್ರೀಂ ಕೋರ್ಟ್ಗೆ ಬಾಧಕವಾಗುವುದಿಲ್ಲ. ಸದ್ಯದಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯಾಗಲಿದ್ದು, ಮೂರ್ನಾಲ್ಕು ದಿನಗಳಲ್ಲಿ ಬಿಎಂಐಸಿ ಸೇರಿದಂತೆ ರಾಜಕೀಯದ ಬಗ್ಗೆಯೂ ವಿವರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ನಾನು ಕಾರಿಡಾರ್ ಯೋಜನೆ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನು ಯಾರ ವಿರೋಧಿಯೂ ಅಲ್ಲ. ಆದರೆ ಹೆಚ್ಚುವರಿ ಭೂಮಿಯ ಬಗ್ಗೆ, ಕನಕಪುರ ಲೋಕಸಭಾ ಸದಸ್ಯನಾಗಿದ್ದ ದಿನಗಳಿಂದಲೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಪರಿಶೀಲಿಸಬಹುದು ಎಂದು ವಿವರಿಸಿದರು.
(ಏಜೆನ್ಸೀಸ್)
ಮುಖಪುಟ / ಕುಮಾರ-ಪರ್ವ
Comments
Story first published: Monday, June 12, 2006, 23:53 [IST]