ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಿಡಾರ್‌ ಯೋಜನೆ : ಸರ್ಕಾರದ ನಿರ್ಧಾರವೇ ಅಂತಿಮ

By Staff
|
Google Oneindia Kannada News

ಕಾರಿಡಾರ್‌ ಯೋಜನೆ : ಸರ್ಕಾರದ ನಿರ್ಧಾರವೇ ಅಂತಿಮ
ಯೋಜನೆ ವಿರೋಧಿಯಲ್ಲ, ಹೆಚ್ಚುವರಿ ಭೂಮಿಯೇಕೆ ಎಂಬುದಷ್ಟೇ ಪ್ರಶ್ನೆ--ದೇವೇಗೌಡ

ಮೈಸೂರು : ಬಿಎಂಐಸಿ(ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌) ಯೋಜನೆ ಕುರಿತು ರಾಜ್ಯ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಭಾನುವಾರ ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಾರಿಡಾರ್‌ ಯೋಜನೆ ಕುರಿತು ಸಮ್ಮಿಶ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಸುಪ್ರೀಂ ಕೋರ್ಟ್‌ಗೆ ಬಾಧಕವಾಗುವುದಿಲ್ಲ. ಸದ್ಯದಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯಾಗಲಿದ್ದು, ಮೂರ್ನಾಲ್ಕು ದಿನಗಳಲ್ಲಿ ಬಿಎಂಐಸಿ ಸೇರಿದಂತೆ ರಾಜಕೀಯದ ಬಗ್ಗೆಯೂ ವಿವರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.

ನಾನು ಕಾರಿಡಾರ್‌ ಯೋಜನೆ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನು ಯಾರ ವಿರೋಧಿಯೂ ಅಲ್ಲ. ಆದರೆ ಹೆಚ್ಚುವರಿ ಭೂಮಿಯ ಬಗ್ಗೆ, ಕನಕಪುರ ಲೋಕಸಭಾ ಸದಸ್ಯನಾಗಿದ್ದ ದಿನಗಳಿಂದಲೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಪರಿಶೀಲಿಸಬಹುದು ಎಂದು ವಿವರಿಸಿದರು.

(ಏಜೆನ್ಸೀಸ್‌)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X