ಹೆಮ್ಮಿಗೆಪುರದ ಬಳಿ ಪ್ರತಿಭಟನೆ : ಹಾಳಾದ ನೈಸ್ ರಸ್ತೆ
ಹೆಮ್ಮಿಗೆಪುರದ
ಬಳಿ
ಪ್ರತಿಭಟನೆ
:
ಹಾಳಾದ
ನೈಸ್
ರಸ್ತೆ
ಪೊಳ್ಳಾದ
ಭರವಸೆ,
ರೊಚ್ಚಿಗೆದ್ದ
ಜನರಿಂದ
50
ಅಡಿ
ಅಗೆತ
ಶನಿವಾರ ಹೆಮ್ಮಿಗೆಪುರದ 200ಕ್ಕೂ ಹೆಚ್ಚು ಜನರು, ಸ್ಥಳೀಯ ಜೆಡಿಎಸ್ ಮುಖಂಡ ಪಂಚಲಿಂಗಯ್ಯ ನೇತೃತ್ವದಲ್ಲಿ ರಸ್ತೆ ಕಾಮಗಾರಿ ನಿಲ್ಲಿಸಿದರು. ಆನಂತರ ಕಾಮಗಾರಿಗೆ ಬಳಸುತ್ತಿದ್ದ ಉಪಕರಣಗಳನ್ನೇ ವಶಪಡಿಸಿಕೊಂಡು, ಮೂರು ಅಡಿ ಆಳ, ಎರಡು ಅಡಿ ಅಗಲದಂತೆ ಸುಮಾರು 50 ಅಡಿ ರಸ್ತೆ ಅಗೆದು ಪ್ರತಿಭಟಿಸಿದರು. ಈ ರಸ್ತೆ ಇದೇ ತಿಂಗಳು 16ರಂದು ಉದ್ಘಾಟನೆಯಾಗಬೇಕಿತ್ತು.
ರಸ್ತೆ ಕಾಮಗಾರಿ ನಡೆಯುವಾಗ ಯಂತ್ರೋಪಕರಣ ಹೊತ್ತ ಭಾರೀ ವಾಹನಗಳು ಸಂಚರಿಸಿದ ಪರಿಣಾಮ, ಗ್ರಾಮದ ರಸ್ತೆ ಹಾಳಾಗಿತ್ತು. ಆಗ ಈ ವಿಚಾರವನ್ನು ನೈಸ್ ಕಂಪನಿ ಗಮನಕ್ಕೆ ತರಲಾಗಿತ್ತು. ರಸ್ತೆ ಕಾಮಗಾರಿ ಮುಗಿದ ನಂತರ ಗ್ರಾಮಕ್ಕೆ ಹೊಸ ರಸ್ತೆ ನಿರ್ಮಿಸಿ ಕೊಡುವುದಾಗಿ ಕಂಪನಿ ಭರವಸೆ ನೀಡಿತ್ತು.
ಈಗ ರಸ್ತೆ ಕಾಮಗಾರಿ ಮುಗಿದು, ಉದ್ಘಾಟನಾ ದಿನ ಸಮೀಪಿಸಿದರೂ ನಮ್ಮೂರ ರಸ್ತೆ ನಿರ್ಮಿಸಲು ಕಂಪನಿ ಹಿಂದೆ ಮುಂದೆ ನೋಡುತ್ತಿದೆ. ಹಾಗಾಗಿ ಈ ರೀತಿ ಪ್ರತಿಭಟಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.
ನೈಸ್ ಪ್ರತಿಕ್ರಿಯೆ : ಗ್ರಾಮಸ್ಥರು ನಡೆಸಿದ ಪ್ರತಿಭಟನೆ ರಾಜಕೀಯ ಪ್ರೇರಿತ. ಅವರ ಬೇಡಿಕೆಗಳು ಅರ್ಥಹೀನ. ಗ್ರಾಮದ ರಸ್ತೆ ಬಿಎಂಐಸಿ(ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್) ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಆ ಸೌಕರ್ಯ ನೀಡುವುದು ಸರ್ಕಾರದ ಜವಾಬ್ದಾರಿ. ನಾವು ಈ ಹೊಣೆ ಹೊರಲಾರೆವು ಎಂದು ನೈಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಹೇಳಿದ್ದಾರೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು