ಒಂದೂವರೆ ವರ್ಷದಲ್ಲಿ ಮೂರನೇ ಬಾರಿ ಬಸ್ದರ ಏರಿಕೆ
ಒಂದೂವರೆ
ವರ್ಷದಲ್ಲಿ
ಮೂರನೇ
ಬಾರಿ
ಬಸ್ದರ
ಏರಿಕೆ
ಡೀಸೆಲ್
ದರ
ಏರಿಕೆ
ಸರಿದೂಗಿಸುವ
ಯತ್ನ,
ಶೇಕಡಾ
8ರಷ್ಟು
ಹೆಚ್ಚಳ
ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂದಿರುಗಿದ ನಂತರ, ಅವರೊಂದಿಗೆ ಚರ್ಚಿಸಿ ದರ ಏರಿಸಲಾಗುವುದು ಎಂದು ಸಾರಿಗೆ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳು ವಿದೇಶ ಪ್ರವಾಸದಿಂದ ಮರಳುವ ಮೊದಲೇ ದರ ಏರಿಕೆ ಆದೇಶ ಹೊರಬಿದ್ದಿದೆ.
ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳೂ ಸೇರಿದಂತೆ ರಾಜ್ಯ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಏರಿಸಿವೆ.
ಇದರೊಂದಿಗೆ ರಾಜ್ಯ ಸಾರಿಗೆ ನಿಗಮ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಒಟ್ಟು ಮೂರು ಬಾರಿ ಪ್ರಯಾಣ ದರ ಏರಿಸಿದಂತಾಗಿದೆ. 2004ರ ಅಕ್ಟೋಬರ್ನಲ್ಲಿ ಶೇಕಡಾ 10ರಷ್ಟು, 2005ರ ಜೂನ್ನಲ್ಲಿ ಶೇಕಡಾ 13.8ರಷ್ಟು ದರ ಏರಿಸಿದ್ದು, ಇದೀಗ ಶೇಕಡಾ 8ರಷ್ಟು ಏರಿಕೆ ಮಾಡಿದೆ.
ಕೇಂದ್ರ ಸರ್ಕಾರ ಡೀಸೆಲ್ ದರ ಹೆಚ್ಚಿಸಿರುವ ಕಾರಣ ದರ ಏರಿಕೆ ಅನಿವಾರ್ಯವಾಗಿತ್ತು. ಅಲ್ಲದೆ ನಿಗಮದ ಸಿಬ್ಬಂದಿಗೆ ಶೇಕಡಾ 7ರಷ್ಟು ತುಟ್ಟಿ ಭತ್ಯೆ ಏರಿಸಲಾಗಿದ್ದು, ಇದನ್ನು ಸರಿದೂಗಿಸಬೇಕಿತ್ತು. ಹಾಗಾಗಿ ಜನಸಾಮಾನ್ಯರಿಗೆ ಹೊರೆಯಾಗದಂತೆ ದರ ಹೆಚ್ಚಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
(ಏಜೆನ್ಸೀಸ್)
ಮುಖಪುಟ / ಕುಮಾರ-ಪರ್ವ