ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಕನ್ನಡ ಪತ್ರಿಕೋದ್ಯಮ ದಿಗ್ಗಜರ ಸಂವಾದ

By Staff
|
Google Oneindia Kannada News

ಭಾನುವಾರ ಕನ್ನಡ ಪತ್ರಿಕೋದ್ಯಮ ದಿಗ್ಗಜರ ಸಂವಾದ
ವಿಕ್ರಾಂತ ಪ್ರಕಾಶನದಿಂದ ಚರ್ಚೆ, ಸಂವಾದ ಮತ್ತು ಚಲನಚಿತ್ರ

ಬೆಂಗಳೂರು : ‘ಸಮಕಾಲೀನ ರಾಜಕೀಯ ಮತ್ತು ಕನ್ನಡ ಪತ್ರಿಕೋದ್ಯಮ’ ವಿಚಾರದ ಬಗೆಗೆ ವಿಕ್ರಾಂತ ಪ್ರಕಾಶನ ಸಂಪಾದಕರ ಸಂವಾದವನ್ನು ಭಾನುವಾರ(ಜೂ.11) ಬೆಳಗ್ಗೆ 10ಕ್ಕೆ ನಗರದಲ್ಲಿ ಆಯೋಜಿಸಿದೆ.

ನಗರದ ಸೋನಾ ಟವರ್ಸ್‌ನ ನಾಣಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರಕಾಶ್‌ ಬೆಳವಾಡಿ ಅವರದು ಪ್ರಾಸ್ತವಿಕ ಮಾತು. ಕೆ.ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ವಿಕ್ರಾಂತ ಪ್ರಕಾಶನದ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಪತ್ರಕರ್ತರಾದ ಈಶ್ವರ ದೈ ತೋಟ, ವಿಶ್ವೇಶ್ವರ ಭಟ್‌, ಆರ್‌.ಪೂರ್ಣಿಮಾ, ವೆಂಕಟನಾರಾಯಣ, ಎಚ್‌.ಆರ್‌.ರಂಗನಾಥ್‌, ಪದ್ಮರಾಜ ದಂಡಾವತಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಲನಚಿತ್ರ : ವಾಟರ್‌ಗೇಟ್‌ ಹಗರಣ ತನಿಖೆ ಮಾಡಿದ ಪತ್ರಕರ್ತರ ಅನುಭವ ಬಿಂಬಿಸುವ ‘ಆಲ್‌ ದಿ ಪ್ರೆಸಿಡೆಂಟ್ಸ್‌ ಮೆನ್‌’ ಚಲನಚಿತ್ರ ಪ್ರದರ್ಶನವನ್ನು ಸಂವಾದದ ನಂತರ ಏರ್ಪಡಿಸಲಾಗಿದೆ.

ಸ್ಥಳ :

ನಾಣಿ ಸಭಾಂಗಣ,
ಸಿ.ಎಫ್‌.ಡಿ., ಐದನೇ ಮಹಡಿ, ಸೋನಾ ಟವರ್ಸ್‌,
71, ಮಿಲ್ಲರ್‌ ರಸ್ತೆ, ಬೆಂಗಳೂರು -52
(ಹೋಟೆಲ್‌ ಚಂದ್ರಿಕಾ ವೃತ್ತದ ಸಮೀಪ)

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X