ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆದಾರರಿಗೆ ಬೆಣ್ಣೆ ! : ಕುಮಾರಸ್ವಾಮಿ ದುಬೈಗೆ

By Staff
|
Google Oneindia Kannada News

ಹೂಡಿಕೆದಾರರಿಗೆ ಬೆಣ್ಣೆ ! : ಕುಮಾರಸ್ವಾಮಿ ದುಬೈಗೆ
ಅಬುದಾಬಿ ಕನ್ನಡ ಸಂಘಟದ ಬೆಳ್ಳಿಹಬ್ಬ ಸಮಾರಂಭದಲ್ಲಿ ಕುಮಾರಸ್ವಾಮಿ...

ಬೆಂಗಳೂರು : ಬುಧವಾರ(ಜೂ.7)ದಿಂದ ಕೊಲ್ಲಿ ದೇಶ ಪ್ರವಾಸವನ್ನು ಕೈಗೊಳ್ಳುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ, ಜೂ.7ರಿಂದ 12ರವರೆಗೆ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ ಮತ್ತು ಓಮನ್‌ ರಾಷ್ಟ್ರಗಳಿಗೆ ಭೇಟಿ ನೀಡಲಿದೆ. ಜೂ.8ರಂದು ದುಬೈನ ಇಂಟರ್‌ನೆಟ್‌ಸಿಟಿ, ಮೀಡಿಯ ಸಿಟಿ, ನಾಲೇಜ್‌ ವಿಲೇಜ್‌ಗಳನ್ನು ನಿಯೋಗ ಸಂದರ್ಶಿಸಲಿದೆ. ಅಲ್ಲಿನ ಬಂಡವಾಳಶಾಹಿಗಳನ್ನು ರಾಜ್ಯಕ್ಕೆ ಆಹ್ವಾನಿಸಲು ನಿಯೋಗ ಮಾತುಕತೆ ನಡೆಸಲಿದೆ.

ಜೂ.9ರಂದು ಅಬುದಾಬಿಯಲ್ಲಿ ಅಲ್ಲಿನ ಕನ್ನಡ ಸಂಘಟನೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವರು. ಜೂ.10ರಂದು ಅಲ್ಲಿನ ಸರ್ಕಾರದ ಜೊತೆ ವಾಣಿಜ್ಯ ಸಂಬಂಧಿ ಚರ್ಚೆಯನ್ನು ನಡೆಸಲಿದ್ದಾರೆ.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸುಧಾಕರ್‌ ರಾವ್‌, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ನಿಯೋಗದಲ್ಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X