ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಂ ಭೇಟಿ ಹಿನ್ನೆಲೆ 2 ದಿನ ನಗರದಲ್ಲಿ ಟ್ರಾಫಿಕ್‌ ಕಿರಿಕಿರಿ

By Staff
|
Google Oneindia Kannada News

ಕಲಾಂ ಭೇಟಿ ಹಿನ್ನೆಲೆ 2 ದಿನ ನಗರದಲ್ಲಿ ಟ್ರಾಫಿಕ್‌ ಕಿರಿಕಿರಿ
ಅಖಿಲ ಭಾರತ ಪೊಲೀಸ್‌ ವಿಜ್ಞಾನ ಸಮಾವೇಶಕ್ಕೆ ರಾಷ್ಟ್ರಪತಿಗಳಿಂದ ಚಾಲನೆ

ಬೆಂಗಳೂರು : ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್‌ ವಿಜ್ಞಾನ ಸಮಾವೇಶ ಸೇರಿದಂತೆ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಸೋಮವಾರ ರಾತ್ರಿ 10ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮೂರು ದಿನಗಳ 37ನೇ ಅಖಿಲ ಭಾರತ ಪೊಲೀಸ್‌ ವಿಜ್ಞಾನ ಸಮಾವೇಶ ಮಂಗಳವಾರ ಆರಂಭವಾಗಲಿದ್ದು, ಎ.ಪಿ.ಜೆ.ಅಬ್ದುಲ್‌ ಕಲಾಂ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ನಿಮ್ಹಾನ್ಸ್‌ ಸಮ್ಮೇಳನ ಸಭಾಂಗಣದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ.

ರಾಜಧಾನಿಗೆ ರಾಷ್ಟ್ರಪತಿಗಳ ಆಗಮನದಿಂದ, ನಗರದ ವಿವಿಧೆಡೆ ಸಂಚಾರ ವ್ಯತ್ಯಯ ಉಂಟಾಗಲಿದೆ. ಸೋಮವಾರ ರಾತ್ರಿ 8.30ರಿಂದ 11ಗಂಟೆವರೆಗೆ ಏರ್‌ಪೋರ್ಟ್‌ ರಸ್ತೆ, ದೊಮ್ಮಲೂರು ರಸ್ತೆ, ಟ್ರಿನಿಟಿ ಚರ್ಚ್‌ ರಸ್ತೆ, ಎಂ.ಜಿ.ರಸ್ತೆ, ಡಿಕನ್ಸನ್‌ ರಸ್ತೆ, ಕಬ್ಬನ್‌ ರಸ್ತೆ, ರಾಜಭವನದ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.

ಮಂಗಳವಾರ ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ಪ್ಯಾಲೇಸ್‌ ಕ್ರಾಸ್‌ ರಸ್ತೆ, ಕೆ.ಎಚ್‌.ರಸ್ತೆ, ಹೊಸೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X