ಮುಳಬಾಗಿಲಿನಲ್ಲಿ ಶ್ರೀ ಶ್ರೀಪಾದರಾಜರ ಆರಾಧನೆ
ಮುಳಬಾಗಿಲಿನಲ್ಲಿ
ಶ್ರೀ
ಶ್ರೀಪಾದರಾಜರ
ಆರಾಧನೆ
ಮೂರು
ದಿನಗಳ
ಕಾರ್ಯಕ್ರಮ,
ಶ್ರೀ
ವಿಜ್ಞಾನನಿಧಿ
ತೀರ್ಥರ
ಉಪಸ್ಥಿತಿ
ಶ್ರೀ ವಿಜ್ಞಾನನಿಧಿತೀರ್ಥ ಸ್ವಾಮಿಗಳ ಉಪಸ್ಥಿತಿಯಲ್ಲಿ ಆರಾಧನಾ ಮಹೋತ್ಸವ ಜರುಗಲಿದೆ. ಜೂ.9ರಂದು ಶ್ರೀ ಶ್ರೀಪಾದರಾಜರ ಪೂರ್ವಾರಾಧನೆ, ಜೂ.10ರಂದು ಮಧ್ಯಾರಾಧನೆ ಮತ್ತು ರಥೋತ್ಸವ ಹಾಗೂ ಜೂ.11ರಂದು ಉತ್ತರಾಧನೆ ನಡೆಯಲಿದೆ.
ಭಕ್ತಾದಿಗಳು ಆರಾಧನೆಯಲ್ಲಿ ಪಾಲ್ಗೊಂಡು ರಂಗವಿಠ್ಠಲಾತ್ಮಕ ಶ್ರೀ ಗೋಪೀನಾಥ, ಶ್ರೀ ಪದ್ಮನಾಭತೀರ್ಥ ಹಾಗೂ ಶ್ರೀ ಶ್ರೀಪಾದರಾಜರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆ ಕೋರಿದೆ. ಈ ಮಠ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಪದ್ಮನಾಭತೀರ್ಥ ಪರಂಪರೆಯದ್ದಾಗಿದೆ.
ಆರಾಧನೆಯಲ್ಲಿ ಸೇವೆ ಸಲ್ಲಿಸಲಿಚ್ಛಿಸುವವರು, ತಮ್ಮ ಹೆಸರು, ಗೋತ್ರ, ನಕ್ಷತ್ರ ಮೊದಲಾದ ವಿವರಗಳೊಂದಿಗೆ, ಮನೀ ಆರ್ಡರ್, ಡಿಮ್ಯಾಂಡ್ ಡ್ರ್ಯಾಫ್ಟ್ ಅಥವಾ ಚೆಕ್ ಮೂಲಕ ಮಠದ ವಿಳಾಸಕ್ಕೆ ಹಣ ಸಂದಾಯ ಮಾಡಿ ರಸೀತಿ ಪಡೆಯಬಹುದು. ಮಠದ ವಿಳಾಸ : ಏಜೆಂಟ್, ಶ್ರೀ ಶ್ರೀಪಾದರಾಜ ಮಠ, ನರಸಿಂಹ ತೀರ್ಥ, ಮುಳಬಾಗಿಲು-563131, ಕೋಲಾರ ಜಿಲ್ಲೆ.
ಹೆಚ್ಚಿನ
ವಿವರಗಳಿಗೆ
ಈ
ಅಂತರ್ಜಾಲ
ಸಂದರ್ಶಿಸಿ
:
Sripadaraja
Aradhana
Details
ಸಂಪರ್ಕಿಸಬೇಕಾದ
ವಿಳಾಸ
:
[email protected]
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು