ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸೈನಿಕ’ ನಾಪತ್ತೆ ! : ನಟ ಯೋಗೀಶ್ವರ್‌ ವಂಚನೆ ?

By Staff
|
Google Oneindia Kannada News

‘ಸೈನಿಕ’ ನಾಪತ್ತೆ ! : ನಟ ಯೋಗೀಶ್ವರ್‌ ವಂಚನೆ ?
ಮೆಗಾಸಿಟಿ ಡೆವಲಪರ್ಸ್‌ ಸಂಸ್ಥೆ ನಿವೇಶನ ನೀಡಲಿಲ್ಲ... ಹಣವನ್ನೂ ಮರಳಿಸಲಿಲ್ಲ...

ಬೆಂಗಳೂರು : ಹಣ ವಂಚನೆ ಆರೋಪಕ್ಕೆ ನಟ ಮತ್ತು ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೀಶ್ವರ್‌ ಸಿಲುಕಿದ್ದಾರೆ. ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ವೇದಿಕೆಯ ನ್ಯಾಯಾಧೀಶ ಶ್ರೀವತ್ಸ ಕೆದಿಲಾಯ ಈ ಬಗ್ಗೆ ಆದೇಶ ನೀಡಿದ್ದಾರೆ. ನಾಪತ್ತೆಯಾಗಿರುವ ಯೋಗೀಶ್ವರ್‌ ಅವರನ್ನು ಪತ್ತೆ ಹಚ್ಚಲು, 15ದಿನಗಳ ಕಾಲಾವಕಾಶವನ್ನು ಪೊಲೀಸರು ಪಡೆದಿದ್ದಾರೆ.

ವಿವರ : ಶೇಷಗಿರಿ ಹಳ್ಳಿಯಲ್ಲಿ ನಿವೇಶನ ಹಂಚುವ ಯೋಜನೆ ಹಿನ್ನೆಲೆ, ಮೆಗಾಸಿಟಿ ಡೆವಲಪರ್ಸ್‌ ಸಂಸ್ಥೆಯನ್ನು ಯೋಗೀಶ್ವರ್‌ ಈ ಹಿಂದೆ ಆರಂಭಿಸಿದ್ದರು. 200ಜನರಿಂದ 1.5ಲಕ್ಷದಿಂದ 2ಲಕ್ಷದವರೆಗೆ ಅವರು ಹಣವನ್ನು ಸಂಗ್ರಹಿಸಿದ್ದರು. ನಂತರದ ದಿನಗಳಲ್ಲಿ ನಿವೇಶನ ನೀಡುವಲ್ಲಿ ಸಂಸ್ಥೆ ವಿಫಲವಾಯಿತು. ಅಲ್ಲದೇ, ಸಂಬಂಧಿಸಿದವರಿಗೆ ಹಣ ವಾಪಸು ಮಾಡಲಿಲ್ಲ.

ಈ ಬಗ್ಗೆ ನ್ಯಾಯಕೋರಿ ಪ್ರೇಮಾ ಆರ್‌.ಶೆಟ್ಟಿ ಎಂಬಾಕೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ವೇದಿಕೆ, ಯೋಗೀಶ್ವರ್‌ ಬಂಧನಕ್ಕೆ ಸೂಚಿಸಿದೆ.

ಸಿನಿಮಾ ಹಿನ್ನೆಲೆ : ‘ಉತ್ತರ ಧ್ರುವಕೂ... ದಕ್ಷಿಣ ಧ್ರುವಕೂ...’ ಮತ್ತು ‘ಸೈನಿಕ ’ ಚಿತ್ರಗಳ ಮೂಲಕ, ಅವರು ನಟರಾಗಿ ಮತ್ತು ನಿರ್ಮಾಪಕರಾಗಿ ಗುರ್ತಿಸಿಕೊಂಡಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X