‘ಸೈನಿಕ’ ನಾಪತ್ತೆ ! : ನಟ ಯೋಗೀಶ್ವರ್ ವಂಚನೆ ?
‘ಸೈನಿಕ’
ನಾಪತ್ತೆ
!
:
ನಟ
ಯೋಗೀಶ್ವರ್
ವಂಚನೆ
?
ಮೆಗಾಸಿಟಿ
ಡೆವಲಪರ್ಸ್
ಸಂಸ್ಥೆ
ನಿವೇಶನ
ನೀಡಲಿಲ್ಲ...
ಹಣವನ್ನೂ
ಮರಳಿಸಲಿಲ್ಲ...
ವೇದಿಕೆಯ ನ್ಯಾಯಾಧೀಶ ಶ್ರೀವತ್ಸ ಕೆದಿಲಾಯ ಈ ಬಗ್ಗೆ ಆದೇಶ ನೀಡಿದ್ದಾರೆ. ನಾಪತ್ತೆಯಾಗಿರುವ ಯೋಗೀಶ್ವರ್ ಅವರನ್ನು ಪತ್ತೆ ಹಚ್ಚಲು, 15ದಿನಗಳ ಕಾಲಾವಕಾಶವನ್ನು ಪೊಲೀಸರು ಪಡೆದಿದ್ದಾರೆ.
ವಿವರ : ಶೇಷಗಿರಿ ಹಳ್ಳಿಯಲ್ಲಿ ನಿವೇಶನ ಹಂಚುವ ಯೋಜನೆ ಹಿನ್ನೆಲೆ, ಮೆಗಾಸಿಟಿ ಡೆವಲಪರ್ಸ್ ಸಂಸ್ಥೆಯನ್ನು ಯೋಗೀಶ್ವರ್ ಈ ಹಿಂದೆ ಆರಂಭಿಸಿದ್ದರು. 200ಜನರಿಂದ 1.5ಲಕ್ಷದಿಂದ 2ಲಕ್ಷದವರೆಗೆ ಅವರು ಹಣವನ್ನು ಸಂಗ್ರಹಿಸಿದ್ದರು. ನಂತರದ ದಿನಗಳಲ್ಲಿ ನಿವೇಶನ ನೀಡುವಲ್ಲಿ ಸಂಸ್ಥೆ ವಿಫಲವಾಯಿತು. ಅಲ್ಲದೇ, ಸಂಬಂಧಿಸಿದವರಿಗೆ ಹಣ ವಾಪಸು ಮಾಡಲಿಲ್ಲ.
ಈ ಬಗ್ಗೆ ನ್ಯಾಯಕೋರಿ ಪ್ರೇಮಾ ಆರ್.ಶೆಟ್ಟಿ ಎಂಬಾಕೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ವೇದಿಕೆ, ಯೋಗೀಶ್ವರ್ ಬಂಧನಕ್ಕೆ ಸೂಚಿಸಿದೆ.
ಸಿನಿಮಾ ಹಿನ್ನೆಲೆ : ‘ಉತ್ತರ ಧ್ರುವಕೂ... ದಕ್ಷಿಣ ಧ್ರುವಕೂ...’ ಮತ್ತು ‘ಸೈನಿಕ ’ ಚಿತ್ರಗಳ ಮೂಲಕ, ಅವರು ನಟರಾಗಿ ಮತ್ತು ನಿರ್ಮಾಪಕರಾಗಿ ಗುರ್ತಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು