ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಿಂದ ಜೂ.9ರಂದು ಮೀಸಲಾತಿ ಪರ ರ್ಯಾಲಿ

By Staff
|
Google Oneindia Kannada News

ಕಾಂಗ್ರೆಸ್‌ನಿಂದ ಜೂ.9ರಂದು ಮೀಸಲಾತಿ ಪರ ರ್ಯಾಲಿ
ತುಳಿತಕ್ಕೆ ಸಿಲುಕಿದ ವರ್ಗಕ್ಕೆ ಈಗ ಮೀಸಲಾತಿ ನೀಡಿದರೆ ತಪ್ಪೇನಿಲ್ಲ -ದಿನೇಶ್‌ ಗುಂಡೂರಾವ್‌

ಬೆಂಗಳೂರು : ಉನ್ನತ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವು ಸಮರ್ಥಿಸಿ, ರಾಜ್ಯ ಯುವ ಕಾಂಗ್ರೆಸ್‌ ಜೂನ್‌ 9ರಂದು ಮೀಸಲಾತಿಪರ ರ್ಯಾಲಿ ನಡೆಸಲಿದೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, ಓಬಿಸಿ ಸೇರಿದಂತೆ ಎಲ್ಲ ವರ್ಗಗಳ ಹಿತ ಕಾಯುವುದು ಪ್ರತಿಯಾಂದು ಸರ್ಕಾರದ ಜವಾಬ್ದಾರಿ ಎಂದರು.

ಹಲವಾರು ವರ್ಷಗಳಿಂದ ತುಳಿತಕ್ಕೊಳಗಾದವರಿಗೆ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ನೀಡಬೇಕಾಗುತ್ತದೆ. ಮೀಸಲಾತಿಗೆ ಅವರು ಅರ್ಹರು. ಮೀಸಲಾತಿ ಯಾವತ್ತೂ ಪ್ರತಿಭಾವಂತರ ಅವಕಾಶಗಳನ್ನು ಕಿತ್ತುಕೊಂಡಿಲ್ಲ. ಆದರೆ ಕೇಂದ್ರ ಸರ್ಕಾರದ ಮೀಸಲಾತಿ ಪರ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿರುವುದು ದುರದೃಷ್ಟಕರ ಎಂದರು.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X