ರಂಗಕರ್ಮಿ ಪ್ರಸನ್ನ ವಿರುದ್ಧ ಕೃತಿಚೌರ್ಯದ ಆರೋಪ
ರಂಗಕರ್ಮಿ
ಪ್ರಸನ್ನ
ವಿರುದ್ಧ
ಕೃತಿಚೌರ್ಯದ
ಆರೋಪ
ರಂಗಾಯಣಕ್ಕೆ
ಪ್ರಸನ್ನರಿಂದ
ದ್ರೋಹ
-ರಾಮಚಂದ್ರದೇವ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಹಿಂದೆ ನಾನು ಶೇಕ್ಸ್ಪಿಯರ್ ಕೃತಿ ಹ್ಯಾಮ್ಲೆಟ್ ಅನುವಾದಿಸಿದ್ದೆ. ಅದು 1978ರಲ್ಲಿ ಪ್ರಕಟವಾಗಿದೆ. ಈ ಕೃತಿಯಲ್ಲಿನ ಬಹುತೇಕ ಭಾಗಗಳನ್ನು ಪ್ರಸನ್ನ ಕದ್ದಿದ್ದಾರೆ. ಅವರ ಕೃತಿ 2003ರಲ್ಲಿ ಪ್ರಕಟವಾಗಿದೆ ಎಂದರು.
ಕೃತಿಯನ್ನು ತಾವೇ ಅನುವಾದ ಮಾಡಿರುವುದಾಗಿ ವ್ಯವಸ್ಥಿತವಾಗಿ ಪ್ರಸನ್ನ, ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಕೃತಿಯ ರಂಗಪ್ರಯೋಗ ಕೂಡ ಮಾಡಿದ್ದಾರೆ. ಪ್ರಸನ್ನ ಪ್ರಜ್ಞಾಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ. ಒಬ್ಬ ಗೌರವಾನ್ವಿತ ವ್ಯಕ್ತಿಯೇ ಕೃತಿಚೌರ್ಯ ಮಾಡಿದ್ದಾರೆ ಎಂದಾಗ ಅನುವಾದ ಮಾಡಲು ಜನ ಹಿಂಜರಿಯುತ್ತಾರೆ ಎಂದು ಟೀಕಿಸಿದರು. ನಾನು ಇನ್ನೂ 16 ಶೇಕ್ಸ್ಪಿಯರ್ ಕೃತಿಗಳನ್ನು ಅನುವಾದಿಸಬೇಕೆಂದಿದ್ದೆ. ಆದರೆ ಪ್ರಸನ್ನರ ವರ್ತನೆಯಿಂದ ಆ ವಿಚಾರ ಕೈಬಿಟ್ಟಿದ್ದೇನೆ ಎಂದರು.
ಸಾಹಿತ್ಯ ಲೋಕದಲ್ಲಿ ಕೃತಿಚೌರ್ಯ :
ಕೃತಿಚೌರ್ಯ ಸಾಹಿತ್ಯಲೋಕಕ್ಕೆ ಅಂಟಿದ ಶಾಪ. ಈ ಬಗ್ಗೆ ಆಗಾಗ ಗಂಭೀರ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೂ ಇದು ಮುಂದುವರಿದಿರುವುದು ಮಾತ್ರ ಸಾಹಿತ್ಯಲೋಕದ ಪ್ರಜ್ಞಾವಂತಿಕೆಯನ್ನು ಪ್ರಶ್ನಿಸುತ್ತದೆ. ಟಿ.ಜಿ.ರಾಘವ ಅವರ ಸಣ್ಣಕಥೆ ಶ್ರಾದ್ಧದ ಕೃತಿಚೌರ್ಯವೇ ಯು.ಆರ್.ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಎಂಬ ಗಂಭೀರ ಆರೋಪ ಸಾಹಿತ್ಯಲೋಕದಲ್ಲಿದೆ.
ತೀರಾ ಇತ್ತೀಚೆಗಷ್ಟೇ ಕಾವ್ಯ ವಿಶ್ವನಾಥನ್ ಎಂಬ ತರುಣಿ ಆಂಗ್ಲಸಾಹಿತ್ಯದಲ್ಲಿ ಕೃತಿಚೌರ್ಯ ಮಾಡಿರುವುದು ಜಗಜ್ಜಾಹೀರಾಗಿದ್ದು, ಈ ಕುರಿತು ಚರ್ಚೆ ಮುಂದುವರಿದಿದೆ. ಇಂತಹ ಸಂದರ್ಭದಲ್ಲೇ ಕನ್ನಡ ಸಾಹಿತ್ಯಲೋಕದ ಹಿರಿಯ ಬರಹಗಾರ ರಾಮಚಂದ್ರದೇವ ಮಾಡಿರುವ ಆರೋಪ ಹೊಸ ಚರ್ಚೆಗೆ ನಾಂದಿ ಹಾಡಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು