ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯತ್ನಾಳ್‌ ಕ್ಷಮೆ : ಬಿಜೆಪಿ ಸಂಘರ್ಷಕ್ಕೆ ತಾತ್ಕಾಲಿಕ ತೆರೆ

By Staff
|
Google Oneindia Kannada News

ಯತ್ನಾಳ್‌ ಕ್ಷಮೆ : ಬಿಜೆಪಿ ಸಂಘರ್ಷಕ್ಕೆ ತಾತ್ಕಾಲಿಕ ತೆರೆ
ಬಿಕ್ಕಟ್ಟು ಪರಿಹಾರಕ್ಕೆ ಸಮನ್ವಯ ಸಮಿತಿ : ರಾಜನಾಥ ಸಿಂಗ್‌ ನಿರ್ಧಾರ

ಬೆಂಗಳೂರು : ಬಿಜೆಪಿ ಬಂಡಾಯ ನಾಯಕ ಬಸನಗೌಡ ಯತ್ನಾಳ್‌ ಅವರ ಕ್ಷಮೆ ಯಾಚನೆಯಾಂದಿಗೆ, ರಾಜ್ಯ ಬಿಜೆಪಿ ಘಟಕದೊಳಗಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.

ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್‌ ಅವರಲ್ಲಿ ಬಿಜಾಪುರ ಸಂಸದ ಯತ್ನಾಳ್‌, ಕ್ಷಮೆಯಾಚಿಸಿದ್ದಾರೆ. ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲು ಯಡಿಯೂರಪ್ಪ ನಡೆಸಿದ ಕಸರತ್ತು, ಉತ್ತರ ಕರ್ನಾಟಕದ ಬಗೆಗಿನ ನಿರ್ಲಕ್ಷ್ಯದಿಂದ ಮನನೊಂದು, ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾಗಿ ಯತ್ನಾಳ್‌ ವಿವರಿಸಿದ್ದಾರೆ.

ಮಾಜಿ ಸಚಿವ ಅನಂತಕುಮಾರ್‌ ಮತ್ತು ಯತ್ನಾಳ್‌ ಜೊತೆ ಮಾತುಕತೆ ನಡೆಸಿದ ರಾಜನಾಥ ಸಿಂಗ್‌, ಬಿಜೆಪಿ ಬಿಕ್ಕಟ್ಟಿಗೆ ಸಮನ್ವಯ ಸಮಿತಿ ರಚಿಸಲು ನಿರ್ಧರಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X