ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್‌ ವಿರೋಧದ ಮಧ್ಯೆಯೂ ವೈದ್ಯರ ಮುಷ್ಕರ

By Staff
|
Google Oneindia Kannada News

ಕೋರ್ಟ್‌ ವಿರೋಧದ ಮಧ್ಯೆಯೂ ವೈದ್ಯರ ಮುಷ್ಕರ
ಸರ್ಕಾರಿ ಆಸ್ಪತ್ರೆಗಳಿಗೆ ಸೇನಾ ವೈದ್ಯರನ್ನು ನಿಯೋಜಿಸಲು ಸರ್ಕಾರದ ಚಿಂತನೆ

ನವದೆಹಲಿ : ಮೀಸಲಾತಿ ವಿರೋಧಿ ಮುಷ್ಕರವನ್ನು ಸುಪ್ರೀಂ ಕೋರ್ಟ್‌ ವಿರೋಧ ಮತ್ತು ಎಚ್ಚರಿಕೆಯ ಮಧ್ಯೆಯೂ, ಬುಧವಾರ ಮುಂದುವರೆಸಲು ಮುಷ್ಕರ ನಿರತ ವೈದ್ಯಕೀಯ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸುವ, ಸರ್ಕಾರದ ಧೋರಣೆ ಪ್ರಶ್ನಿಸಿ ಮುಷ್ಕರ ಮುಂದುವರೆದಿದೆ. ಈ ಮಧ್ಯೆ ಸುಪ್ರೀಂಕೋರ್ಟ್‌ ಮುಷ್ಕರವನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸೂಚನೆ ನೀಡಿದೆ.

ಮೀಸಲಾತಿ ಬಗ್ಗೆ ಅಭಿಪ್ರಾಯ ತಿಳಿಸಲು ಇದು ಸಕಾಲವಲ್ಲ. ಆದರೆ ಮುಷ್ಕರದಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಹಿತದೃಷ್ಟಿಯಿಂದ ಮುಷ್ಕರ ನಿಲ್ಲಿಸಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಆರೋಪದ ಮೇಲೆ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸುಪ್ರೀಂಕೋರ್ಟ್‌ ಎಚ್ಚರಿಸಿದೆ.

ಎಸ್ಮಾ ಜಾರಿ ಇಲ್ಲ : ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿ ಮಾಡುವುದಿಲ್ಲ. ಮುಷ್ಕರ ನಿಲ್ಲಿಸದಿದ್ದರೆ, ಬುಧವಾರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಸೇನಾ ವೈದ್ಯರನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ಡಾ.ಎ.ರಾಮದಾಸ್‌ ತಿಳಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X