ಶೈಕ್ಷಣಿಕ ಪ್ರಗತಿ : ಮೊದಲ ಸ್ಥಾನಕ್ಕೇರಲು ರಾಜ್ಯದ ಯತ್ನ
ಶೈಕ್ಷಣಿಕ
ಪ್ರಗತಿ
:
ಮೊದಲ
ಸ್ಥಾನಕ್ಕೇರಲು
ರಾಜ್ಯದ
ಯತ್ನ
ಪ್ರತಿ
ವಿದ್ಯಾರ್ಥಿಗೆ
810
ರೂಪಾಯಿ
ಖರ್ಚು,
ಶಿಕ್ಷಣ
ಸಮೃದ್ಧಿಗೆ
ವ್ಯಾಪಕ
ಕಾರ್ಯಕ್ರಮ
-ಹೊರಟ್ಟಿ
ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಐದು ಸಾವಿರ ಶಿಕ್ಷಕರಿಗೆ ‘ಗುರುಸದನ’ ಎಂಬ ಮನೆಗಳನ್ನು ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 350 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ 30ಕೋಟಿ ರೂಪಾಯಿ ವೆಚ್ಚದಲ್ಲಿ ಪಠ್ಯಪುಸ್ತಕಗಳನ್ನು ಹಾಗೂ 93.5ಕೋಟಿ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯ ಸಮವಸ್ತ್ರ ಹಾಗೂ ಪಠ್ಯಪುಸ್ತಕಕ್ಕೆ ತಲಾ 810ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದರು.
ಕಟ್ಟಡ-ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ, ಶೈಕ್ಷಣಿಕವಾಗಿ ಹಿಂದುಳಿದ ಉತ್ತರ ಕರ್ನಾಟಕದ 61 ಬ್ಲಾಕುಗಳನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದು ಸಚಿವರು ಹೇಳಿದರು.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು