ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಪರ್ವ ಶುರು : ರಾಜ್ಯದತ್ತ ಮುಂಗಾರು ಮಾರುತ

By Staff
|
Google Oneindia Kannada News

ಮಳೆ ಪರ್ವ ಶುರು : ರಾಜ್ಯದತ್ತ ಮುಂಗಾರು ಮಾರುತ
ಕೇರಳಕ್ಕೆ ನೈಋತ್ಯ ಮಾರುತ ನಿರೀಕ್ಷೆಗಿಂತಲೂ ಮೊದಲೇ ಆಗಮನ, ಮಳೆಯೋ ಮಳೆ...

ಬೆಂಗಳೂರು : ಮುಂಗಾರು ಮಾರುತ ನಿರೀಕ್ಷೆಗಿಂತಲೂ ಮುಂಚೆಯೇ ರಾಜ್ಯಕ್ಕೆ ಪ್ರವೇಶಿಸಲಿದೆ. ಶನಿವಾರ ನೈಋತ್ಯ ಮಾರುತ ರಾಜ್ಯದ ಕರಾವಳಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದರ ಪರಿಣಾಮವೋ ಎಂಬಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರ ಭಾರೀ ಮಳೆಯಾಗಿದೆ. ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಸುರಿದಿದೆ. ಇಲಕಲ್‌ ಪಟ್ಟಣದಲ್ಲಿ ಮಳೆಯಿಂದ 88 ಗುಡಿಸಲುಗಳು ಜಲಾವೃತವಾಗಿವೆ.

ನಿರೀಕ್ಷೆಗಿಂತಲೂ ಆರು ದಿನಗಳ ಮುನ್ನವೇ ನೈಋತ್ಯ ಮಾರುತ ಶುಕ್ರವಾರ ಕೇರಳವನ್ನು ಪ್ರವೇಶಿಸಿದೆ. ಅದು ಕರ್ನಾಟಕದ ಕರಾವಳಿ ಮೂಲಕ, ಈ ಮಾಸಾಂತ್ಯದೊಳಗೆ ಕರ್ನಾಟಕದ ಒಳನಾಡನ್ನು ಪ್ರವೇಶಿಸಬಹುದು ಎನ್ನಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X