ಲೋಕಾಯುಕ್ತ ಎನ್. ವೆಂಕಟಾಚಲಗೆ ನೆಟ್ಟಿಗರ ಬೆಂಬಲ
ಲೋಕಾಯುಕ್ತ
ಎನ್.
ವೆಂಕಟಾಚಲಗೆ
ನೆಟ್ಟಿಗರ
ಬೆಂಬಲ
ಇನ್ನೈದು
ವರ್ಷ
ಅಧಿಕಾರ
ನೀಡ
ಬೇಕೆ?
ಬೇಡವೆ?
ನಿಮ್ಮ
ಅನಿಸಿಕೆ
ತಿಳಿಸಿ...
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ(ಕೆಎಸ್ಎಚ್ಆರ್ಸಿ) ಇಂಟರ್ನೆಟ್ನಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಆಂದೋಲನ, ಯಶಸ್ವಿಯಾಗಿ ಮುಂದುವರೆದಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ಒದಗಿಸಿರುವ ಸಮಿತಿಯ ರಾಜ್ಯಾಧ್ಯಕ್ಷ ಎಸ್.ಕೆ.ವಿವೇಕಾನಂದ, ಅಭಿಪ್ರಾಯ ಸಂಗ್ರಹ ಆಂದೋಲನಕ್ಕೆ ಅಂತರ್ಜಾಲದಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಂದೋಲನ ಆರಂಭವಾದ ಒಂದೆರಡು ದಿನದಲ್ಲಿಯೇ 10,800 ಹಿಟ್ಸ್ಗಳು ಬಂದಿವೆ ಎಂದರು.
ವೆಂಕಟಾಚಲರ ಮುಂದುವರಿಕೆಗೆ ಒತ್ತಾಯಿಸಿ, ಸದಾಶಿವನಗರ, ಮಲ್ಲೇಶ್ವರಂ, ವಿಜಯನಗರ, ಯಶವಂತಪುರದಲ್ಲಿ ಸಾರ್ವಜನಿಕರ ಸಹಿ ಸಂಗ್ರಹಿಸಲಾಯಿತು. ಮೇ.25ರವರೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಗಮನ ಸೆಳೆಯಲಾಗುವುದು ಎಂದರು.
ಜು.1ಕ್ಕೆ ವೆಂಕಟಾಚಲ ಅವರ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಇನ್ನೂ 5ವರ್ಷಗಳ ಕಾಲ ಅವರ ಅಧಿಕಾರವಧಿಯನ್ನು ವಿಸ್ತರಣೆ ಮಾಡಿ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಈ ಸಂಬಂಧಿ ಸಹಿ ಆಂದೋಲನದಲ್ಲಿ ಪಾಲ್ಗೊಳ್ಳುವ ಇಚ್ಛೆ ಇದ್ದರೆ, ಇಲ್ಲಿ ಕ್ಲಿಕ್ಕಿಸಿ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು