ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯೂಸಿ ಫಲಿತಾಂಶ : ಏಳು ವಿದ್ಯಾರ್ಥಿಗಳ ಆತ್ಮಹತ್ಯೆ

By Staff
|
Google Oneindia Kannada News

ಪಿಯೂಸಿ ಫಲಿತಾಂಶ : ಏಳು ವಿದ್ಯಾರ್ಥಿಗಳ ಆತ್ಮಹತ್ಯೆ
ನಿಮ್ಮ ಮಗ/ಮಗಳು ಫೇಲಾದರೆ, ಆಕಾಶ ತಲೆ ಮೇಲೆ ಬೀಳೋದಿಲ್ಲ...

ಬೆಂಗಳೂರು : ದ್ವಿತೀಯ ಪಿಯೂಸಿ ಪರೀಕ್ಷೆ ಫಲಿತಾಂಶದ ಬೆನ್ನಲ್ಲಿಯೇ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈವರೆಗೆ ನಗರದ ಏಳು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, ಅತೀವ ದುಗುಡ, ಪೋಷಕರ ಭಯ, ಅವಮಾನ -ಹೀಗೆ ನಾನಾ ಕಾರಣಗಳಿಂದ ವಿದ್ಯಾರ್ಥಿಗಳು ಸಾವಿನ ಮನೆಯ ಬಾಗಿಲು ತಟ್ಟುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರ ವಿವರ :

ದೊಮ್ಮಲೂರಿನ 3ನೇ ತಿರುವಿನಲ್ಲಿ ವಾಸವಿರುವ ಅರ್ಚನಾ(19), ಹಲಸೂರಿನ ಪ್ರೇಮ(18), ದೊಡ್ಡಮಾವಳ್ಳಿಯ ಪ್ರೀತಿ(17), ಕುಮಾರಸ್ವಾಮಿ ಲೇಔಟ್‌ನ ಪ್ರದೀಪ್‌(17), ಬಸವೇಶ್ವರ ನಗರದ ಭರತ್‌ಕುಮಾರ್‌(19), ಇಂದಿರಾನಗರದ ನಂದಿತಾ ಕಿಶೋರ್‌(18), ಯಶವಂತಪುರದ ರೆಹಮಾನ್‌ ಖಾನ್‌(18).

ಕೇವಲ ಮೂರು ಗಂಟೆಯ ಪರೀಕ್ಷೆ, ಭವಿಷ್ಯವನ್ನು ನಿರ್ಧರಿಸಲಾರದು. ಈ ಅರಿವು ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಬಾರದ ಹೊರತು, ಇಂತಹ ಆತ್ಮಹತ್ಯೆಗಳು ನಿಲ್ಲುವುದಿಲ್ಲ. ಸೋತವರು ಗೆಲ್ಲಲೇ ಬೇಕು, ಗೆದ್ದವರು ನಿಲ್ಲಲೇ ಬೇಕು... ಬದುಕು ಬಲು ದೊಡ್ಡದು... ಸಾವು ಯಾವುದಕ್ಕೂ ಉತ್ತರವಲ್ಲ.

ನಿಮಗೆ ಗೊತ್ತಿರಲಿ - ಮಕ್ಕಳೆಂದರೆ ಮಲ್ಯ ಸಾಕಿದ ಕುದುರೆಗಳಲ್ಲ...

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X