ಪಿಯೂಸಿ ಫಲಿತಾಂಶ : ಏಳು ವಿದ್ಯಾರ್ಥಿಗಳ ಆತ್ಮಹತ್ಯೆ
ಪಿಯೂಸಿ
ಫಲಿತಾಂಶ
:
ಏಳು
ವಿದ್ಯಾರ್ಥಿಗಳ
ಆತ್ಮಹತ್ಯೆ
ನಿಮ್ಮ
ಮಗ/ಮಗಳು
ಫೇಲಾದರೆ,
ಆಕಾಶ
ತಲೆ
ಮೇಲೆ
ಬೀಳೋದಿಲ್ಲ...
ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, ಅತೀವ ದುಗುಡ, ಪೋಷಕರ ಭಯ, ಅವಮಾನ -ಹೀಗೆ ನಾನಾ ಕಾರಣಗಳಿಂದ ವಿದ್ಯಾರ್ಥಿಗಳು ಸಾವಿನ ಮನೆಯ ಬಾಗಿಲು ತಟ್ಟುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರ ವಿವರ :
ದೊಮ್ಮಲೂರಿನ 3ನೇ ತಿರುವಿನಲ್ಲಿ ವಾಸವಿರುವ ಅರ್ಚನಾ(19), ಹಲಸೂರಿನ ಪ್ರೇಮ(18), ದೊಡ್ಡಮಾವಳ್ಳಿಯ ಪ್ರೀತಿ(17), ಕುಮಾರಸ್ವಾಮಿ ಲೇಔಟ್ನ ಪ್ರದೀಪ್(17), ಬಸವೇಶ್ವರ ನಗರದ ಭರತ್ಕುಮಾರ್(19), ಇಂದಿರಾನಗರದ ನಂದಿತಾ ಕಿಶೋರ್(18), ಯಶವಂತಪುರದ ರೆಹಮಾನ್ ಖಾನ್(18).
ಕೇವಲ ಮೂರು ಗಂಟೆಯ ಪರೀಕ್ಷೆ, ಭವಿಷ್ಯವನ್ನು ನಿರ್ಧರಿಸಲಾರದು. ಈ ಅರಿವು ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಬಾರದ ಹೊರತು, ಇಂತಹ ಆತ್ಮಹತ್ಯೆಗಳು ನಿಲ್ಲುವುದಿಲ್ಲ. ಸೋತವರು ಗೆಲ್ಲಲೇ ಬೇಕು, ಗೆದ್ದವರು ನಿಲ್ಲಲೇ ಬೇಕು... ಬದುಕು ಬಲು ದೊಡ್ಡದು... ಸಾವು ಯಾವುದಕ್ಕೂ ಉತ್ತರವಲ್ಲ.
ನಿಮಗೆ ಗೊತ್ತಿರಲಿ - ಮಕ್ಕಳೆಂದರೆ ಮಲ್ಯ ಸಾಕಿದ ಕುದುರೆಗಳಲ್ಲ...
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು