ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಲ್ಲಿ ಜಾನಪದ ಗಾರುಡಿಗ ಎಸ್‌.ಕೆ.ಕರೀಂಖಾನ್‌

By Staff
|
Google Oneindia Kannada News

ಆಸ್ಪತ್ರೆಯಲ್ಲಿ ಜಾನಪದ ಗಾರುಡಿಗ ಎಸ್‌.ಕೆ.ಕರೀಂಖಾನ್‌
ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿಗೆ ಸಾರ್ವಜನಿಕ ವಲಯದಿಂದ ಖಂಡನೆ

ಬೆಂಗಳೂರು : ಜಾನಪದ ಗಾರುಡಿಗ ಎಸ್‌.ಕೆ.ಕರೀಂ ಖಾನ್‌ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಪ್ರಕಟಿಸಿದ್ದಾರೆ.

ಬೌರಿಂಗ್‌ ಹಾಸ್ಟತ್ರೆಗೆ ಭೇಟಿ ನೀಡಿ, ಅನಾರೋಗ್ಯದಿಂದ ಬಳಲುತ್ತಿರುವ ಕರೀಂಖಾನ್‌ರನ್ನು ಭೇಟಿ ಮಾಡಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಒಂದು ವಾರದಿಂದಲೂ ಆಸ್ಪತ್ರೆಯಲ್ಲಿ ಕರೀಂಖಾನ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆದುಳಿನಲ್ಲಿ ಏನೋ ಸಮಸ್ಯೆಉಂಟಾಗಿ, ಅವರಿಗೆ ಈಗ ಬಾಹ್ಯ ಪ್ರಪಂಚದ ಅರಿವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ನಿರ್ಲಕ್ಷ್ಯ : ಮೊದಲಿನಿಂದಲೂ ಸರ್ಕಾರ, ಕರೀಂ ಖಾನ್‌ರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಅವರನ್ನು ನೋಡಿಕೊಳ್ಳಲು ನೇಮಕಮಾಡಲಾಗಿರುವ ನೌಕರನಿಗೆ, ಕಳೆದ 14ತಿಂಗಳಿಂದ ವೇತನ ನೀಡಿಲ್ಲ. ನಾಡಿನ ಹಿರಿಯಜ್ಜನ ಬಗೆಗೆ ಸರ್ಕಾರ ಅಸಡ್ಡೆ ಮಾಡಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X