ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಸಮ್ಮುಖದಲ್ಲಿ ಬಾಲ್ಯವಿವಾಹ, ಛೇ ಛೇ...

By Staff
|
Google Oneindia Kannada News

ಮುಖ್ಯಮಂತ್ರಿ ಸಮ್ಮುಖದಲ್ಲಿ ಬಾಲ್ಯವಿವಾಹ, ಛೇ ಛೇ...
ಸಿಂಧನೂರು ತಾಲೂಕಿನಲ್ಲಿ ಮದುವೆ ವಿವಾದ, ತನಿಖೆಗೆ ಆದೇಶ

ಸಿಂಧನೂರು : ಅಲ್ಲೊಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ. ಅದರಲ್ಲಿ ಪಾಲ್ಗೊಂಡಿದ್ದ ವಧು-ವರರಲ್ಲಿ ನಾಲ್ವರು ಅಪ್ರಾಪ್ತ ವಯಸ್ಸಿನವರೂ ಇದ್ದರು. ಅವರು ದಾಂಪತ್ಯವನ್ನು ಪ್ರವೇಶಿಸಿದರು! ಅಲ್ಲಿ ಪೊಲೀಸರೂ ಇದ್ದರು. ಇನ್ನಿತರೆ ಅಧಿಕಾರಿಗಳೂ ಇದ್ದರು. ಇನ್ನೂ ವಿಶೇಷವೆಂದರೆ ; ಆ ದಂಪತಿಗಳಿಗೆ ಮುಖ್ಯಮಂತ್ರಿಗಳ ಆಶೀರ್ವಾದವೂ ಇತ್ತು!

ಹೌದು, ಇಂತಹದೊಂದು ಘಟನೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ. ಈ ಸಾಮೂಹಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕೆಎಎಫ್‌ ಅಧ್ಯಕ್ಷ ವೆಂಕಟರಾವ್‌ ನಾಡಗೌಡ.

ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ನಡೆದ ಈ ಬಾಲ್ಯವಿವಾಹ ಪ್ರಕರಣ, ಈಗ ತೀವ್ರ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X