ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದೆಲ್ಲೆಡೆ ವರ್ಷಧಾರೆ, ಈ ಹರ್ಷದ ಮಧ್ಯೆ ಆರು ಬಲಿ

By Staff
|
Google Oneindia Kannada News

ರಾಜ್ಯದೆಲ್ಲೆಡೆ ವರ್ಷಧಾರೆ, ಈ ಹರ್ಷದ ಮಧ್ಯೆ ಆರು ಬಲಿ
ಮರಗಳು ಧರೆಗೆ, ರಸ್ತೆ ಸಂಚಾರ ಕಿರಿಕಿರಿ, ಇನ್ನೂ ಒಂದೆರಡು ದಿನ ಕೈಯಲ್ಲಿ ಛತ್ರಿ ಇರಲಿ...

ಬೆಂಗಳೂರು : ಬೆಂಗಳೂರು ಜನರಿಗೆ ಸಂಜೆಯಾದರೆ ಮಳೆ ಕಾಟ ತಪ್ಪಿದ್ದಲ್ಲ ಎನ್ನುವಂತಾಗಿದೆ. ಇಂತಹ ಪರಿಸ್ಥಿತಿ ಇನ್ನೂ ಒಂದೆರಡು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

ವರುಣನ ಆರ್ಭಟ ಗುರುವಾರ ತೀವ್ರಗೊಂಡಿತ್ತು. ರಾಜ್ಯದ ವಿವಿಧೆಡೆ ಭಾರೀ ಮಳೆ ಸುರಿದಿದ್ದು, ಒಟ್ಟು ಆರು ಜನ ಮೃತಪಟ್ಟು ಹಲವಾರು ಮರಗಿಡಗಳು ನೆಲಕ್ಕುರುಳಿವೆ.

ಕೆಲವೆಡೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಚೆನ್ನರಾಯಪಟ್ಟಣದಲ್ಲಿ ಮೂವರು, ಮೈಸೂರಿನಲ್ಲಿ ಇಬ್ಬರು ಹಾಗೂ ತುಮಕೂರಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಬಿದ್ದ ಭಾರೀ ಮಳೆಯಿಂದ ಹಲವಾರು ಮರಗಳು ನೆಲಕ್ಕುರುಳಿದ್ದು, ಮರಗಳ ಅಡಿಯಲ್ಲಿ ಸಿಕ್ಕ ಕೆಲವು ವಾಹನಗಳು ಜಖಂಗೊಂಡಿವೆ. ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದಲ್ಲದೆ, ವಿದ್ಯುತ್‌ ಕಡಿತವೂ ತಲೆದೋರಿತು.

ರಾಜ್ಯದ ಬಹುತೇಕ ಎಲ್ಲೆಡೆ ಮಳೆಯಾಗಿದ್ದು, ವಿಜಾಪುರ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು, ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಸುರಿದಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X