ಪ್ರತಿವರ್ಷ ಇನ್ನೂ 1000 ಇಂಜಿನಿಯರ್ಗಳ ಸೃಷ್ಟಿ!!!
ಪ್ರತಿವರ್ಷ
ಇನ್ನೂ
1000
ಇಂಜಿನಿಯರ್ಗಳ
ಸೃಷ್ಟಿ!!!
ರಾಜ್ಯದ
12
ಕಾಲೇಜುಗಳಲ್ಲಿ
ಸೀಟು
ಹೆಚ್ಚಳ
:
ಸಂಪುಟ
ಉಪಸಮಿತಿ
ಅಸ್ತು
ಉಪಸಮಿತಿ ಸಭೆಯ ನಂತರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದ ಒಟ್ಟು 12 ಕಾಲೇಜುಗಳಲ್ಲಿ 1000 ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಲಾಗುವುದು.ಬಯೋ ಟೆಕ್ನಾಲಜಿ, ಕಂಪ್ಯೂಟರ್ ವಿಜ್ಞಾನ, ಮಾಹಿತಿ ವಿಜ್ಞಾನ, ವಿದ್ಯುನ್ಮಾನ ಸೇರಿದಂತೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದ ಸಹಮತವಿಲ್ಲದೆ ಎಐಸಿಟಿಇ ಮತ್ತು ಕೇಂದ್ರ ಸರ್ಕಾರ ಸೀಟುಗಳ ಹೆಚ್ಚಳ ಮಾಡುವ ಅಧಿಕಾರ ಹೊಂದಿದೆ. ಹೀಗಾಗಿ ಅನಿವಾರ್ಯ ಕಾರಣದಿಂದ, ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು ಎಂದು ಹೊರಟ್ಟಿ ಹೇಳಿದ್ದಾರೆ.
ವಿರೋಧದ ಮಧ್ಯೆ ಅನುಮೋದನೆ : ಉಪಸಮಿತಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇನ್ನಿತರ ಮೂವರು ಸಚಿವರ ವಿರೋಧದ ನಡುವೆಯೂ ಉಪಸಮಿತಿ, ಸೀಟು ಹೆಚ್ಚಳಕ್ಕೆ ಅನುಮತಿ ನೀಡಿದೆ.
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಇಂಜಿನಿಯರಿಂಗ್ ಕಾಲೇಜು, ಚಿಕ್ಕಮಗಳೂರಿನ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜು, ತುಮಕೂರಿನ ಸಿದ್ಧಾರ್ಥ ಕಾಲೇಜು ಸೇರಿದಂತೆ ರಾಜ್ಯದ 12 ಕಾಲೇಜುಗಳಲ್ಲಿನ ಸೀಟುಗಳಲ್ಲಿ ಹೆಚ್ಚಳವಾಗಲಿದೆ.
(ಯುಎನ್ಐ)
ಮುಖಪುಟ / ಕುಮಾರ-ಪರ್ವ