ಇಂದು‘ಅಂಗಾರಕಿ’ ಸಂಕಷ್ಟ ಚತುರ್ಥಿ: ಕಷ್ಟ ಕಳೆದುಕೊಳ್ಳಿ...
ಇಂದು‘ಅಂಗಾರಕಿ’
ಸಂಕಷ್ಟ
ಚತುರ್ಥಿ:
ಕಷ್ಟ
ಕಳೆದುಕೊಳ್ಳಿ...
21ಸಲ
ವ್ರತ
ಮಾಡೋದಕ್ಕಿಂತ
ಇವತ್ತು
ಒಂದು
ದಿನ
ವ್ರತ
ಮಾಡಿದರೆ
ಸಾಕು!
ಎಲ್ಲಾ
ಪುಣ್ಯ
ಲಭ್ಯ!
21 ಬಾರಿ ಸಂಕಷ್ಟ ವ್ರತ ಮಾಡುವುದೂ 1 ಬಾರಿ ಅಂಗಾರಕ ಸಂಕಷ್ಟಿ(ಮಂಗಳವಾರ ಬರುವ ಸಂಕಷ್ಟ ಚತುರ್ಥಿ) ಮಾಡುವುದಕ್ಕೆ ಸಮ ಎಂಬ ನಂಬಿಕೆ ಇದೆ. ಹೀಗಾಗಿ ಇಂದಿನ ಅಂಗಾರಕಿ ಸಂಕಷ್ಟಿ ಗೆ ಹೆಚ್ಚಿನ ಮಹತ್ವ.
ಹಿನ್ನೆಲೆ : ಸಂಕಷ್ಟಿ, ಅಂಗಾರಕಿ ಸಂಕಷ್ಟಿ ಎಂದರೇನು ಎಂದು ಕೆಲವರು ಕೇಳಬಹುದು. ಆದರೆ ಹಲವು ಭಾರತೀಯರಿಗೆ ಅದರ ಪರಿಚಯ ಇದ್ದೇ ಇರುತ್ತದೆ. ವಿಶೇಷವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನತೆಗಂತೂ ಚಿರಪರಿಚಿತ.
ಸಕಲ ವಿಘ್ನ ವಿನಾಶಕ; ಗಣೇಶ. ಹಾಗಾಗಿಯೇ ಯಾವುದೇ ಕಾರ್ಯಕ್ರಮ ನಡೆದರೂ, ಮೊದಲು ಗಣೇಶನಿಗೇ ಪೂಜೆ ಸಲ್ಲುತ್ತದೆ. ತಮ್ಮ ಸಂಕಷ್ಟಗಳ ಬಿಡುಗಡೆ ಹೊಂದಬೇಕುಂಬುದು ಎಲ್ಲರ ಬಯಕೆ. ಆಗ ಗಣೇಶನಿಗೆ ಮೊರೆಹೋಗುವುದು ವಾಡಿಕೆ. ಸಂಕಷ್ಟ ಚತುರ್ಥಿ ದಿನ ಜನರು ಗಣೇಶನಿಗೆ ಮೊರೆಹೋಗುತ್ತಾರೆ. ಆ ಮೂಲಕ ತಮ್ಮ ಸಂಕಷ್ಟಗಳ ನಿವಾರಣೆಗೆ ಪ್ರಯತ್ನಿಸುತ್ತಾರೆ.
ಪ್ರತಿ ಕೃಷ್ಣಪಕ್ಷದ ಚತುರ್ಥಿ(ಹುಣ್ಣಿಮೆ ನಂತರ ಬರುವಂಥದ್ದು)ಗೆ ಸಂಕಷ್ಟಹರ ಚತುರ್ಥಿ ಎನ್ನುತ್ತಾರೆ. ಇದನ್ನು ಸಂಕಷ್ಟಿ ಎಂದೂ ಕರೆಯುವುದುಂಟು.
ಅಂಗಾರಕಿ ಸಂಕಷ್ಟ ಚತುರ್ಥಿ ಬಗ್ಗೆ ಪೂರ್ಣ ಮಾಹಿತಿ
(ದಟ್ಸ್ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು