ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಳಿಗಿರಿ ರಂಗಯ್ಯನ ಬ್ರಹ್ಮರಥೋತ್ಸವಕ್ಕೆ ಭಕ್ತರ ಪ್ರವಾಹ

By Staff
|
Google Oneindia Kannada News

ಬಿಳಿಗಿರಿ ರಂಗಯ್ಯನ ಬ್ರಹ್ಮರಥೋತ್ಸವಕ್ಕೆ ಭಕ್ತರ ಪ್ರವಾಹ
ಸಾವಿರಾರು ಭಕ್ತರಿಂದ ಪೂಜೆ , ರಂಗಯ್ಯನಿಗೆ ಹರಕೆ ಸಲ್ಲಿಕೆ

ಚಾಮರಾಜನಗರ : ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ, ಸಾವಿರಾರು ಭಕ್ತರ ಶ್ರದ್ಧಾಭಕ್ತಿಯ ಮಧ್ಯೆ ವಿಜೃಂಭನೆಯಿಂದ ನೆರವೇರಿತು.

ಯಳಂದೂರು ತಹಸೀಲ್ದಾರ್‌ ಎಸ್‌.ಎನ್‌.ನಾಗರತ್ನಮ್ಮ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಬಿಳಿಗಿರಿ ರಂಗನ ಬೆಟ್ಟದಲ್ಲಿ ಗುರುವಾರ ನಡೆದ ಈ ಉತ್ಸವಕ್ಕೆ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು. ಕೆಎಸ್‌ಆರ್‌ಟಿಸಿ 50ಕ್ಕೂ ಅಧಿಕ ಬಸ್‌ಗಳ ಸೇವೆಯನ್ನು ಕಲ್ಪಿಸಿತ್ತು.

ಸುಮಾರು 500 ವರ್ಷಗಳ ಪರಂಪರೆ ಹೊಂದಿರುವ ಶ್ರೀರಂಗನಾಥಸ್ವಾಮಿ, ಸುಮಾರು 5,100 ಅಡಿ ಎತ್ತರದ ಬಿಳಿಗಿರಿ ಬೆಟ್ಟದ ಮೇಲೆ ನೆಲೆಸಿದ್ದಾನೆ. ಹಸಿರ ಕಾನನದ ಮಧ್ಯೆ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಬಿಳಿಗಿರಿ ಶೋಭಿಸುತ್ತಿತ್ತು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X