ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಲೇಖಾ ಹತ್ಯೆ : ಭಾರತಿ ಅರಸ್‌ ಜಾಮೀನಿಗೆ ನಕಾರ

By Staff
|
Google Oneindia Kannada News

ಚಿತ್ರಲೇಖಾ ಹತ್ಯೆ : ಭಾರತಿ ಅರಸ್‌ ಜಾಮೀನಿಗೆ ನಕಾರ
ನಾರಾಯಣ ಹೃದಯಾಲಯದಲ್ಲಿ ಪೊಲೀಸ್‌ ರಕ್ಷಣೆಯಲ್ಲಿ ಅರಸ್‌ಗೆ ಚಿಕಿತ್ಸೆ : ಸುಪ್ರೀಂ ಕೋರ್ಟ್‌

ನವದೆಹಲಿ : ವಕೀಲೆ ಚಿತ್ರಲೇಖಾ ಕೊಲೆ ಪ್ರಕರಣದ ಆರೋಪಿ ಭಾರತಿ ಅರಸ್‌( ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್‌ ಅರಸ್‌ರ ಪುತ್ರಿ) ಅವರ ಜಾಮೀನು ಅರ್ಜಿಯನ್ನು, ಸವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅಶೋಕ್‌ ಭಾನ್‌ ಮತ್ತು ಲೋಕೇಶ್ವರಸಿಂಗ್‌, ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.

ಹೃದ್ರೋಗದಿಂದ ಬಳಲುತ್ತಿರುವ ಭಾರತಿ ಅರಸ್‌ರನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಿಸಿ, ಡಾ.ದೇವೀಪ್ರಸಾದ್‌ ಶೆಟ್ಟಿ ಉಸ್ತುವಾರಿಯಲ್ಲಿ ಚಿಕಿತ್ಸೆ ಕೊಡಿಸುವಂತೆ ನ್ಯಾಯಾಲಯ ಆದೇಶಿಸಿದೆ. ಕಾರಾಗೃಹದಲ್ಲೇ ಚಿಕಿತ್ಸೆ ನೀಡಬೇಕೆಂಬ ರಾಜ್ಯ ಹೈಕೋರ್ಟ್‌ನ ಆದೇಶವನ್ನು ಸವೋಚ್ಚ ನ್ಯಾಯಾಲಯ ತಳ್ಳಿ ಹಾಕಿದೆ.

2004ರಲ್ಲಿ ನಡೆದ ಚಿತ್ರಲೇಖಾ ಅರಸ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಕಾರಾಗೃಹದಲ್ಲಿ ಭಾರತಿ ಅರಸ್‌ರನ್ನು ಇಡಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X