ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಕಾರ್ಯ ಸಂಸ್ಥೆಗೆ ಭಾರತಜ್ಯೋತಿ ರಾಷ್ಟ್ರೀಯ ಪ್ರಶಸ್ತಿ

By Staff
|
Google Oneindia Kannada News

ಸತ್ಕಾರ್ಯ ಸಂಸ್ಥೆಗೆ ಭಾರತಜ್ಯೋತಿ ರಾಷ್ಟ್ರೀಯ ಪ್ರಶಸ್ತಿ
ವಿವಿಧ ಸಂಘ-ಸಂಸ್ಥೆಗಳಿಗೆ ದೆಹಲಿ ಕರ್ನಾಟಕ ಸಂಘ-ಜ್ಞಾನಮಂದಾರದಿಂದ ಪ್ರೋತ್ಸಾಹ

ಬೆಂಗಳೂರು : ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅಮೆರಿಕಾದ ಸತ್ಕಾರ್ಯ ಚಾರಿಟೆಬಲ್‌ ಟ್ರಸ್ಟ್‌ಗೆ ಭಾರತಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಅನಿವಾಸಿ ಭಾರತೀಯ ಸಂಸ್ಥೆಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಮಾಜಸೇವೆ ಗುರುತಿಸಿ, ದೆಹಲಿ ಕರ್ನಾಟಕ ಸಂಘ ಹಾಗೂ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತಿವೆ.

ಈ ಪ್ರಶಸ್ತಿಗೆ ಆಯ್ಕೆಯಾದ ಇತರ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿವರ ಕೆಳಗಿನಂತಿದೆ :

  • ಅಮೆರಿಕಾ ಕನ್ನಡ ಕೂಟಗಳ ಆಗರ(ಅಕ್ಕ) - ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕ್ಷೇತ್ರ
  • ನ್ಯೂಜಿಲೆಂಡ್‌ ಕನ್ನಡ ಕೂಟ - ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರ
  • ಮಾರ್ಗದೀಪ ಸಾಂಸ್ಕೃತಿಕ ಸಂಸ್ಥೆ, ಶಾರ್ಜಾ - ಸಾಂಸ್ಕೃತಿಕ ಕ್ಷೇತ್ರ
  • ಷಡಕ್ಷರಪ್ಪ ಮತ್ತು ತಾರಾ ಚಾರಿಟೀಸ್‌ ಅಮೆರಿಕಾ - ಶೈಕ್ಷಣಿಕ, ಪರಿಸರ ಮತ್ತು ಧಾರ್ಮಿಕ ಕ್ಷೇತ್ರ
  • ಡಾ.ಬಿ.ಕೆ.ಯೂಸುಫ್‌ - ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕ್ಷೇತ್ರ
  • ಕೆ.ಜಿ.ಶೇಖರ್‌- ಸಮಾಜಸೇವಾ ಕ್ಷೇತ್ರ
  • ಈರಣ್ಣ ಮೂಲೀಮನಿ - ಕನ್ನಡ ಸಾಹಿತ್ಯ ಕ್ಷೇತ್ರ
  • ಮುಂಬಯಿನ ಡಾ.ಸದಾನಂದ್‌.ಆರ್‌.ಶೆಟ್ಟಿ - ಶೈಕ್ಷಣಿಕ, ವೈದ್ಯಕೀಯ ಮತ್ತು ಸಮಾಜಸೇವಾ ಕ್ಷೇತ್ರ
  • ಬಿ.ಎನ್‌.ನಾಗೇಶ್‌- ಸಮಾಜಸೇವಾ ಕ್ಷೇತ್ರ
  • ಮುಂಬಯಿನ ಡಾ.ಜೆ.ಡಿ.ಜೋಶಿ - ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರ
  • ಕೆ.ಪಿ.ಮಂಜುನಾಥ್‌- ಪತ್ರಿಕೋದ್ಯಮ ಕ್ಷೇತ್ರ
  • ಬರೋಡಾದ ಎಸ್‌.ಕೆ.ಹಳ್ಳೆಯಂಗಡಿ - ಸಮಾಜಸೇವಾ ಕ್ಷೇತ್ರ
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X