ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಜಾಪುರ ಜಿಲ್ಲೆ ಗೊಳಸಂಗಿ ಬಳಿ ರಸ್ತೆ ಅಪಘಾತ, 5 ಸಾವು
ವಿಜಾಪುರ
ಜಿಲ್ಲೆ
ಗೊಳಸಂಗಿ
ಬಳಿ
ರಸ್ತೆ
ಅಪಘಾತ,
5
ಸಾವು
ಲಾರಿ-ಲಕ್ಷುರಿ
ಬಸ್
ಪರಸ್ಪರ
ಡಿಕ್ಕಿ,
25
ಜನರಿಗೆ
ತೀವ್ರಪೆಟ್ಟು
ಈ ದುರ್ಘಟನೆ ರಾಷ್ಟ್ರೀಯ ಹೆದ್ದಾರಿ 13ರಲ್ಲಿ, ಭಾನುವಾರ ಬೆಳಗ್ಗೆ 7 ಗಂಟೆ ಸುಮಾರು ನಡೆದಿದೆ. ಮೃತಪಟ್ಟ ಐವರೂ ಲಕ್ಷುರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಲಕ್ಷುರಿ ಬಸ್ ಬೆಂಗಳೂರಿನಿಂದ ವಿಜಾಪುರಕ್ಕೆ ತೆರಳುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತದಲ್ಲಿ 25 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಕ್ಷಣವೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠರು, ಈ ಕುರಿತು ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕೆಲಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
(ಯು ಎನ್ ಐ)
ಮುಖಪುಟ / ವಾರ್ತೆಗಳು
Comments
Story first published: Sunday, May 7, 2006, 23:53 [IST]