‘ಅಗ್ರಹಾರ ಕೃಷ್ಣಮೂರ್ತಿ ಚಾರಿತ್ರ್ಯವಧೆಯನ್ನು ನಿಲ್ಲಿಸಿ’
‘ಅಗ್ರಹಾರ
ಕೃಷ್ಣಮೂರ್ತಿ
ಚಾರಿತ್ರ್ಯವಧೆಯನ್ನು
ನಿಲ್ಲಿಸಿ’
ಕನ್ನಡ
ದ್ರೋಹಕ್ಕೆ
ಖಂಡನೆ
:
ಮೈಸೂರಿನಲ್ಲಿ
ಸಾಹಿತಿಗಳು,
ರಂಗಕರ್ಮಿಗಳ
ವ್ಯಾಪಕ
ಪ್ರತಿಭಟನೆ
ಹಿರಿಯ ಸಾಹಿತಿ ಡಾ। ಎಸ್.ಎಲ್. ಭೈರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಗ್ರಹಾರ ಕೃಷ್ಣಮೂರ್ತಿ ಅವರ ವಿರುದ್ಧ ಹುಸಿ ಆರೋಪಗಳನ್ನು ಮಾಡಲಾಗಿದೆ. ಅವರು ಪರಿಶುದ್ಧರೆಂಬುದು ಸಿಬಿಐ ತನಿಖೆ ಮೂಲಕ ಬೆಳಕಿಗೆ ಬಂದಿದೆ. ಆದರೂ ಚಾರಿತ್ರ್ಯವಧೆ ಮುಂದುವರೆದಿರುವುದು ವಿಪರ್ಯಾಸಕರ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಚಾರಿತ್ರವಧೆ ಮಾಡುವ ಮೂಲಕ ಕನ್ನಡಿಗರೊಬ್ಬರಿಗೆ ಸಿಕ್ಕಿರುವ ಗೌರವಾನ್ವಿತ ಹುದ್ದೆಯನ್ನು ಮಣ್ಣು ಪಾಲು ಮಾಡಲಾಗುತ್ತಿದೆ. ಈ ಷಡ್ಯಂತ್ರವನ್ನು ಪಟ್ಟಭದ್ರರು ನಡೆಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.
ಸಾಹಿತಿಗಳಾದ ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ರಂಗಾಯಣ ನಿರ್ದೇಶಕ ಚಿದಂಬರ ರಾವ್ ಜಂಬೆ, ರಂಗಕರ್ಮಿ ಬಸವಲಿಂಗಯ್ಯ, ವಿಚಾರವಾದಿ ಕೆ. ರಾಮದಾಸ್, ಲಿಂಗದೇವರು ಹಳೇಮನೆ, ಕೆ.ಎನ್. ಶಿವತೀರ್ಥನ್, ಎಚ್. ಜನಾರ್ಧನ್, ಪ್ರಸನ್ನ, ಗೋಪಿನಾಥ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಸಾರಸ್ವತ ಲೋಕದಲ್ಲಿನ ಒಡಕು ಧ್ವನಿಗಳು ಈ ಘಟನೆಯ ಹಿನ್ನೆಲೆಯಲ್ಲಿ ಮತ್ತಷ್ಟು ಧ್ವನಿ ಪಡೆದಿವೆ. ಈ ಮಾತನ್ನು ನೀವು ಒಪ್ಪುವಿರಾ?
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು