ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹರಣಕಾರರ ಬಂಧನ : ತಾಯ ಮಡಿಲಿಗೆ ಗೌತಮ್‌

By Staff
|
Google Oneindia Kannada News

ಅಪಹರಣಕಾರರ ಬಂಧನ : ತಾಯ ಮಡಿಲಿಗೆ ಗೌತಮ್‌
ಕಾರ್ಮಿಕರಿಂದಲೇ ಉದ್ಯಮಿ ಚಕ್ರವರ್ತಿ ಪುತ್ರನ ಅಪಹರಣ, ಗ್ವಾಲಿಯರ್‌ನಲ್ಲಿ ಸುಖಾಂತ

ಗ್ವಾಲಿಯರ್‌ : ಕರ್ನಾಟಕದ ಅಪಹೃತ ಬಾಲಕ ಗ್ವಾಲಿಯರ್‌ನಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿದ್ದಾನೆ. ಮಧ್ಯಪ್ರದೇಶದ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರು ಅಪಹರಣಕಾರರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಉದ್ಯಮಿ ಪಿ.ಚಕ್ರವರ್ತಿ ಅವರ ಪುತ್ರ ಗೌತಮ್‌(7)ನನ್ನು, ಹೆಬ್ಬಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪಹರಣಕಾರರು, ಏ.27ರಂದು ಅಪಹರಿಸಿದ್ದರು. ಬಿಡುಗಡೆಗಾಗಿ 7ಕೋಟಿ ಕೋರಿದ್ದ ಅಪಹರಣಕಾರರು, ಕಡೆಗೆ 2ಕೋಟಿಗೆ ಒಪ್ಪಿದ್ದರು.

ಚಕ್ರವರ್ತಿ ಅವರ ಟೈಲ್ಸ್‌ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ , ವಿನೋದ್‌ ಧಾಕಡ್‌ ಮತ್ತು ಮರಳಿ ಕಿರಾರ್‌ ಈ ಅಪಹರಣದಲ್ಲಿ ಭಾಗಿಗಳು. ಶಾಲೆಯಿಂದ ಗೌತಮ್‌ನನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಬೆಂಗಳೂರಿನಿಂದ ನವದೆಹಲಿಗೆ ಅಪಹೃತ ಬಾಲಕನೊಂದಿಗೆ ತೆರಳಿದ್ದ ಆರೋಪಿಗಳು, ಅಲ್ಲಿಂದ ಗ್ವಾಲಿಯಾರ್‌ಗೆ ತೆರಳಿದ್ದರು. ಅಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X