ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಪಹರಣಕಾರರ ಬಂಧನ : ತಾಯ ಮಡಿಲಿಗೆ ಗೌತಮ್
ಅಪಹರಣಕಾರರ
ಬಂಧನ
:
ತಾಯ
ಮಡಿಲಿಗೆ
ಗೌತಮ್
ಕಾರ್ಮಿಕರಿಂದಲೇ
ಉದ್ಯಮಿ
ಚಕ್ರವರ್ತಿ
ಪುತ್ರನ
ಅಪಹರಣ,
ಗ್ವಾಲಿಯರ್ನಲ್ಲಿ
ಸುಖಾಂತ
ಬೆಂಗಳೂರಿನ ಉದ್ಯಮಿ ಪಿ.ಚಕ್ರವರ್ತಿ ಅವರ ಪುತ್ರ ಗೌತಮ್(7)ನನ್ನು, ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಹರಣಕಾರರು, ಏ.27ರಂದು ಅಪಹರಿಸಿದ್ದರು. ಬಿಡುಗಡೆಗಾಗಿ 7ಕೋಟಿ ಕೋರಿದ್ದ ಅಪಹರಣಕಾರರು, ಕಡೆಗೆ 2ಕೋಟಿಗೆ ಒಪ್ಪಿದ್ದರು.
ಚಕ್ರವರ್ತಿ ಅವರ ಟೈಲ್ಸ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ , ವಿನೋದ್ ಧಾಕಡ್ ಮತ್ತು ಮರಳಿ ಕಿರಾರ್ ಈ ಅಪಹರಣದಲ್ಲಿ ಭಾಗಿಗಳು. ಶಾಲೆಯಿಂದ ಗೌತಮ್ನನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಬೆಂಗಳೂರಿನಿಂದ ನವದೆಹಲಿಗೆ ಅಪಹೃತ ಬಾಲಕನೊಂದಿಗೆ ತೆರಳಿದ್ದ ಆರೋಪಿಗಳು, ಅಲ್ಲಿಂದ ಗ್ವಾಲಿಯಾರ್ಗೆ ತೆರಳಿದ್ದರು. ಅಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, May 4, 2006, 23:53 [IST]