ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡೆಂಡಿರ ಜಗಳ ಬಿಡಿಸಲು ಹೋದವಳಿಗೆ ಸಾವಿನ ಶಿಕ್ಷೆ!

By Staff
|
Google Oneindia Kannada News

ಗಂಡೆಂಡಿರ ಜಗಳ ಬಿಡಿಸಲು ಹೋದವಳಿಗೆ ಸಾವಿನ ಶಿಕ್ಷೆ!
ಮನೆ ಬಾಡಿಗೆದಾರರ ಸಂಸಾರ ಸರಿ ಮಾಡಲು ಹೋದ ಪುಟ್ಟಮ್ಮ, ಮತ್ತೆ ಬರಲಿಲ್ಲ!

ಬೆಂಗಳೂರು : ‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತು. ಆದರೆ ಈ ಜಗಳ, ಮನೆ ಮಾಲೀಕರ ಸಾವಿನೊಂದಿಗೆ ಅಂತ್ಯಗೊಂಡಿದೆ!

ಗಂಡ ಹೆಂಡಿರ ಜಗಳ ಬಿಡಿಸಲು ಹೋಗಿ ಕೊಲೆಯಾದ ನತದೃಷ್ಟೆಯ ಹೆಸರು ಪುಟ್ಟಮ್ಮ. ಗಾರ್ವೆಬಾವಿಪಾಳ್ಯದ ಲಕ್ಷ್ಮಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.

ವಿವರ : ಪುಟ್ಟಮ್ಮನ ಮನೆಯಲ್ಲಿ ಬಾಡಿಗೆಗಿದ್ದ ನಂದಗೋಪಾಲ ಮತ್ತು ಅರುಣಾದೇವಿ ದಂಪತಿಗಳು, ನಿತ್ಯ ಜಗಳವಾಡುತ್ತಿದ್ದರು. ಅಂದೂ ಸಹಾ ಜಗಳ ತಾರಕಕ್ಕೇರಿತ್ತು. ಎಂದಿನಂತೆಯೇ ಗಂಡ ಹೆಂಡಿರ ಜಗಳ ಬಿಡಿಸಲು ಪುಟ್ಟಮ್ಮ ಮುಂದಾದರು.

ಜಗಳದ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ನಂದಗೋಪಾಲ, ಪತ್ನಿಯನ್ನು ಚಾಕುವಿನಿಂದ ಇರಿಯಲು ಪ್ರಯತ್ನಿಸಿದ. ಈ ಘಟನೆಯಲ್ಲಿ ಚಾಕು ಪುಟ್ಟಮ್ಮನಿಗೆ ತಾಕಿ, ಆಕೆ ಮೃತಪಟ್ಟಳು. ನಂದಗೋಪಾಲನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X