ಸಿರಿಗನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ : ಆಡ್ವಾಣಿ ಬೆಂಬಲ
ಸಿರಿಗನ್ನಡಕ್ಕೆ
ಶಾಸ್ತ್ರೀಯ
ಸ್ಥಾನಮಾನ
:
ಆಡ್ವಾಣಿ
ಬೆಂಬಲ
ಮೇ.3ರಿಂದ
ರಾಜ್ಯದಲ್ಲಿ
ಭಾರತ್
ಸುರಕ್ಷಾ
ಯಾತ್ರ
ಆರಂಭ
ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರ ನಿಯೋಗದೊಂದಿಗೆ ಮಾತನಾಡಿದ ಅವರು, ಶಾಸ್ತ್ರೀಯ ಭಾಷೆಯ ಗೌರವ ಹೊಂದಲು ಕನ್ನಡ ಭಾಷೆಗೆ ಅರ್ಹತೆ ಇದೆ. ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಪೂರೈಸುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದರು.
ವಿಧಾನಸಭೆ ಚುನಾವಣಾ ಭಾಷಣದ ಹಿನ್ನೆಲೆಯಲ್ಲಿ, ಹೊಸೂರು ಮಾರ್ಗವಾಗಿ ತಮಿಳುನಾಡಿಗೆ ತೆರಳಲು ಆಡ್ವಾಣಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ಆಡ್ವಾಣಿ ಅವರನ್ನು ಭೇಟಿ ಮಾಡಿ, ಕನ್ನಡ ಪರ ವಿಚಾರಗಳನ್ನು ಚರ್ಚಿಸಿತು.
ಮೇ.3ರಿಂದ ಯಾತ್ರೆ : ನಟ ರಾಜ್ಕುಮಾರ್ ನಿಧನದಿಂದ ರದ್ದಾಗಿದ್ದ ಭಾರತ್ ಸುರಕ್ಷಾ ಯಾತ್ರೆ ಮೇ.3ರಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಮುಂದುವರೆಯಲಿದೆ. ಎಲ್.ಕೆ.ಆಡ್ವಾಣಿ ಅವರು, ಬಿಜಾಪುರ, ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು