ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನ್ಯಾಯಮಂಡಳಿ ಬಗ್ಗೆ ವಿಶ್ವಾಸವಿಲ್ಲ - ಮೊಯಿಲಿ

By Staff
|
Google Oneindia Kannada News

ಕಾವೇರಿ ನ್ಯಾಯಮಂಡಳಿ ಬಗ್ಗೆ ವಿಶ್ವಾಸವಿಲ್ಲ - ಮೊಯಿಲಿ
ವಿಶ್ವಾಸ ಕಳೆದುಕೊಂಡ ನ್ಯಾಯಮಂಡಳಿ, ಸುಪ್ರೀಂ ಕೋರ್ಟ್‌ಗೆ ತಮಿಳುನಾಡು

ಕೊಯಮತ್ತೂರು : ಕಾವೇರಿ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಯಾವುದೇ ರಾಜಕೀಯ ಪಕ್ಷವೂ ಬೆಂಬಲಿಸುವುದಿಲ್ಲ ಎಂದು ತಮಿಳುನಾಡು, ಕೇರಳದ ಎಐಸಿಸಿ ಚುನಾವಣಾ ವೀಕ್ಷಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

ಸೋಮವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, 16 ವರ್ಷ ಕಳೆದರೂ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ನೀಡಿಲ್ಲ. ಹಾಗಾಗಿ ಸಂಬಂಧಪಟ್ಟ ರಾಜ್ಯಗಳು ನ್ಯಾಯಮಂಡಳಿ ಬಗ್ಗೆ ವಿಶ್ವಾಸ ಕಳೆದುಕೊಂಡಿವೆ ಎಂದರು.

ಕನಿಷ್ಠ ಪಕ್ಷ ಮುಂದಿನ ಐದು ವರ್ಷಗಳಲ್ಲಾದರೂ ಅಂತಿಮ ತೀರ್ಪು ನೀಡಿದರೆ, ಟ್ರಿಬ್ಯೂನಲ್‌ ಬಗ್ಗೆ ಜನರಲ್ಲಿ ವಿಶ್ವಾಸ ಉಳಿಯಲಿದೆ ಎಂದು ಮೊಯಿಲಿ ಅಭಿಪ್ರಾಯಪಟ್ಟರು.

ತಮಿಳುನಾಡು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುತ್ತಿರುವ ಕುರಿತು ಗಮನ ಸೆಳೆದಾಗ, ಇದರ ಕುರಿತು ಹೆಚ್ಚೇನೂ ಹೇಳಲಾರೆ. ಆದರೆ ಟ್ರಿಬ್ಯೂನಲ್‌ನ ಆದೇಶ ಒಪ್ಪಲಾರೆ. ಇದರಿಂದ ಸಂಬಂಧಪಟ್ಟ ಯಾವುದೇ ರಾಜ್ಯಗಳಿಗೂ ಲಾಭವಾಗದು ಎಂದು ಅವರು ಪ್ರತಿಕ್ರಿಯಿಸಿದರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X