ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ವಿವಾದ : ಹೊಸ ಜಗಳಕ್ಕೆ ಮಹಾರಾಷ್ಟ್ರದ ಸಿದ್ಧತೆ?

By Staff
|
Google Oneindia Kannada News

ಗಡಿ ವಿವಾದ : ಹೊಸ ಜಗಳಕ್ಕೆ ಮಹಾರಾಷ್ಟ್ರದ ಸಿದ್ಧತೆ?
ಸುಪ್ರೀಂ ಕೋರ್ಟ್‌ಗೆ ಅರ್ಜಿ, ಕರ್ನಾಟಕದ ಪ್ರದೇಶಗಳು ಕೇಂದ್ರಾಡಳಿತಕ್ಕೆ...?

ಬೆಂಗಳೂರು : ಕರ್ನಾಟಕದೊಡನೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಜಗಳ ಕಾಯಲು ಮಹಾರಾಷ್ಟ್ರ ಸಿದ್ಧತೆ ನಡೆಸಿರುವುದು ತಿಳಿದು ಬಂದಿದೆ.

ಕರ್ನಾಟಕದ ಜೊತೆಗಿನ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಈ ಕುರಿತು ಅಂತಿಮ ತೀರ್ಪು ಬರುವವರೆಗೆ ಮರಾಠಿ ಪ್ರಭಾವವಿರುವ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ ಮತ್ತು ಭಾಲ್ಕಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.

ತೀರಾ ಇತ್ತೀಚೆಗಷ್ಟೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ವಿವಾದದ ಸಂಗತಿ ಪ್ರಸ್ತಾಪವಾಗಿತ್ತು. ರಾಜ್ಯದ ಹಿತಕಾಯುವಂತೆ, ದೇಶ್‌ಮುಖ್‌ ಸರ್ಕಾರದ ಮೇಲೆ ಈ ಸಂಬಂಧ ಪ್ರತಿಪಕ್ಷಗಳು ಭಾರೀ ಒತ್ತಡ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಹೊಸ ತಂಟೆಗೆ ಮಹಾರಾಷ್ಟ್ರ ಮುಂದಾಗಿದೆ.

ಒಂದು ವೇಳೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೆ, ಕರ್ನಾಟಕ ಏನು ಮಾಡಬಹುದು? ಏನು ಮಾಡಬೇಕು? - ಓದುಗರು ತಮ್ಮ ಅನಿಸಿಕೆ ಬರೆಯಬಹುದು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X