ಗಡಿ ವಿವಾದ : ಹೊಸ ಜಗಳಕ್ಕೆ ಮಹಾರಾಷ್ಟ್ರದ ಸಿದ್ಧತೆ?
ಗಡಿ
ವಿವಾದ
:
ಹೊಸ
ಜಗಳಕ್ಕೆ
ಮಹಾರಾಷ್ಟ್ರದ
ಸಿದ್ಧತೆ?
ಸುಪ್ರೀಂ
ಕೋರ್ಟ್ಗೆ
ಅರ್ಜಿ,
ಕರ್ನಾಟಕದ
ಪ್ರದೇಶಗಳು
ಕೇಂದ್ರಾಡಳಿತಕ್ಕೆ...?
ಕರ್ನಾಟಕದ ಜೊತೆಗಿನ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಈ ಕುರಿತು ಅಂತಿಮ ತೀರ್ಪು ಬರುವವರೆಗೆ ಮರಾಠಿ ಪ್ರಭಾವವಿರುವ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ ಮತ್ತು ಭಾಲ್ಕಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ.
ತೀರಾ ಇತ್ತೀಚೆಗಷ್ಟೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ವಿವಾದದ ಸಂಗತಿ ಪ್ರಸ್ತಾಪವಾಗಿತ್ತು. ರಾಜ್ಯದ ಹಿತಕಾಯುವಂತೆ, ದೇಶ್ಮುಖ್ ಸರ್ಕಾರದ ಮೇಲೆ ಈ ಸಂಬಂಧ ಪ್ರತಿಪಕ್ಷಗಳು ಭಾರೀ ಒತ್ತಡ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಹೊಸ ತಂಟೆಗೆ ಮಹಾರಾಷ್ಟ್ರ ಮುಂದಾಗಿದೆ.
ಒಂದು ವೇಳೆ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರೆ, ಕರ್ನಾಟಕ ಏನು ಮಾಡಬಹುದು? ಏನು ಮಾಡಬೇಕು? - ಓದುಗರು ತಮ್ಮ ಅನಿಸಿಕೆ ಬರೆಯಬಹುದು.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು