ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್‌ಕುಮಾರ್‌ ಬಂಧನಕ್ಕೆ ಪೊಲೀಸರ ಬಲೆ -ಮಿರ್ಜಿ

By Staff
|
Google Oneindia Kannada News

ರಮೇಶ್‌ಕುಮಾರ್‌ ಬಂಧನಕ್ಕೆ ಪೊಲೀಸರ ಬಲೆ -ಮಿರ್ಜಿ
ಮರ್ಡರ್‌ ಮಿಸ್ಟರಿ, ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌

ಕೋಲಾರ : ವಿಧಾನ ಸಭೆ ಮಾಜಿ ಅಧ್ಯಕ್ಷ ಮತ್ತು ಶ್ರೀನಿವಾಸಪುರದ ಮಾಜಿ ಶಾಸಕರೂ ಆದ ರಮೇಶ್‌ಕುಮಾರ್‌ ಬಂಧನಕ್ಕೆ ಕೋಲಾರ ಪೊಲೀಸರು ಬಲೆ ಬೀಸಿದ್ದಾರೆ.

ರಮೇಶ್‌ಕುಮಾರ್‌ ವಿರುದ್ಧ, ಶ್ರೀನಿವಾಸಪುರದ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದೆ. ಕಾಂಗ್ರೆಸ್‌ ಮುಖಂಡ ಶ್ಯಾಮ ಶಂಕರ ರೆಡ್ಡಿ ಮತ್ತು ಕದಿರಪ್ಪ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಮೇಶ್‌ಕುಮಾರ್‌ ಆರೋಪಕ್ಕೆ ಗುರಿಯಾಗಿದ್ದಾರೆ.

ಈ ಮಧ್ಯೆ ರಮೇಶ್‌ಕುಮಾರ್‌ ಬಂಧನಕ್ಕೆ ವಿಶೇಷ ಪೊಲೀಸ್‌ ತಂಡ ರಚಿಸಿರುವುದಾಗಿ, ಐಜಿಪಿ ಬಿ.ಜಿ.ಜ್ಯೋತಿ ಪ್ರಕಾಶ್‌ ಮಿರ್ಜಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಿನ್ನೆಲೆ : 2003ರ ಮಾ.31ರಂದು ಕಾಂಗ್ರೆಸ್‌ ಮುಖಂಡ ಶ್ಯಾಮ ಶಂಕರರೆಡ್ಡಿ ಮತ್ತು ಕದಿರಪ್ಪ ಅವರು ಮೋಟರ್‌ ಸೈಕಲ್‌ನಲ್ಲಿ ಬರುವಾಗ, ಮಾರ್ಗಮಧ್ಯೆ ಹಲ್ಲೆಗೆ ಸಿಲುಕಿ ಕೊಲೆಯಾಗಿದ್ದರು. ಈ ಕೊಲೆಯಲ್ಲಿ ರಮೇಶ್‌ ಕುಮಾರ್‌ ಪಾತ್ರವಿದೆ ಎನ್ನುವುದು ಸಿಓಡಿ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X