ಸದ್ಯದಲ್ಲಿಯೇ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ತುಟ್ಟಿ?
ಸದ್ಯದಲ್ಲಿಯೇ
ಕೆಎಸ್ಆರ್ಟಿಸಿ
ಬಸ್
ಪ್ರಯಾಣ
ದರ
ತುಟ್ಟಿ?
ವಾಯುವ್ಯ-ಈಶಾನ್ಯ
ವಿಭಾಗದಲ್ಲಿ
ನಷ್ಟ,
ವೋಲ್ವೋ
ಬಸ್ಗೆ
ವ್ಯಾಪಕ
ಪ್ರತಿಕ್ರಿಯೆ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ವಿಭಾಗಗಳು ನಷ್ಟ ಎದುರಿಸುತ್ತಿವೆ. ಈ ನಷ್ಟ ತುಂಬಲು ದರ ಏರಿಕೆ ಅನಿವಾರ್ಯ. ಅಧಿಕಾರಿಗಳ ಸಮಾಲೋಚನೆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಮಿನಿ ಬಸ್ ಸೇವೆಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗಾಗಿ, ಈ ಸೇವೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಮಿನಿ ಬಸ್ಗಳನ್ನು ನಗರ ಸಾರಿಗೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಆರಂಭವಾದ ವೋಲ್ವೋ ಬಸ್ ಸೇವೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಏಳು ಬಸ್ಗಳು ಮಾತ್ರ ಸಂಚರಿಸುತ್ತಿದ್ದು, ಮಾಸಾಂತ್ಯದಲ್ಲಿ ಈ ಸಂಖ್ಯೆ 25ಕ್ಕೆ ಏರಲಿದೆ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು