ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗೆ ಬೈಬೈ... ಸಿದ್ದುಗೆ ಜೈಜೈ : ಸಿಂಧ್ಯ ಚಿಂತನೆ

By Staff
|
Google Oneindia Kannada News

ದೇವೇಗೌಡರಿಗೆ ಬೈಬೈ... ಸಿದ್ದುಗೆ ಜೈಜೈ : ಸಿಂಧ್ಯ ಚಿಂತನೆ
ನೂತನ ದೋಸ್ತಿ ಸರ್ಕಾರಕ್ಕೆ ಸಿಂಧ್ಯ ಛೀಮಾರಿ, ಸಿದ್ದರಾಮಯ್ಯ ವ್ಯಕ್ತಿತ್ವ ಶ್ಲಾಘನೆ.

ಬೆಂಗಳೂರು : ದೇವೇಗೌಡರ ಗುಂಪಿನಲ್ಲಿ ಈವರೆಗೆ ಗುರ್ತಿಸಿಕೊಂಡಿದ್ದ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯ, ಸಿದ್ದರಾಮಯ್ಯ ಅವರ ಬಣ ಸೇರುವ ಬಗ್ಗೆ ಒಳದನಿಯಲ್ಲಿ ಮಾತನಾಡುತ್ತಿದ್ದಾರೆ.

ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಶಂಸೆ ಮಾಡಿದ ಸಿಂಧ್ಯ, ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಿದ್ದರಾಮಯ್ಯ ಅವರು ದೇವರಾಜ ಅರಸರ ಮುಂದುವರೆದ ಆದರ್ಶದಂತೆ ಕಾಣುತ್ತಿದ್ದಾರೆ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ಪ್ರಮುಖ ರಾಜಕೀಯ ತೀರ್ಮಾನವನ್ನು ಸದ್ಯದಲ್ಲಿಯೇ ಕೈಗೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿನ ದೋಸ್ತಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಂಧ್ಯ, ಇದೊಂದು ಅಪವಿತ್ರ ಮೈತ್ರಿ. ಅಧಿಕಾರಕ್ಕಾಗಿ ಒಂದಾದ ಮನಸ್ಸುಗಳು ಒಳ್ಳೆ ಆಡಳಿತ ನೀಡಲಾರವು ಎಂದು ಅಭಿಪ್ರಾಯಪಟ್ಟರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X